ADVERTISEMENT

ಜಾನುವಾರು ಮೇವು ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 8:15 IST
Last Updated 18 ಏಪ್ರಿಲ್ 2012, 8:15 IST

ಪಾವಗಡ: ತಾಲ್ಲೂಕಿನ ಗಡಿ ಗ್ರಾಮ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ಪಾವಗಡ ರಾಮಕೃಷ್ಣ-ವಿವೇಕಾನಂದ ಆಶ್ರಮದ ಜಪಾನಂದ ಸ್ವಾಮೀಜಿ ವೆಂಕಟಮ್ಮನಹಳ್ಳಿಯಲ್ಲಿ ಜಾನುವಾರು ಮೇವು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ರೈತರ ನೋವಿಗೆ ಸ್ಪಂದಿಸುತ್ತಿದ್ದು, ಆಶ್ರಮದ ವತಿಯಿಂದ ರಾಯಚೆರ‌್ಲು, ಅಚ್ಚಮ್ಮನಹಳ್ಳಿ, ಕಡಮಲಕುಂಟೆ ಗ್ರಾಮಗಳಲ್ಲಿ ಮೇವು ವಿತರಿಸಲಾಗಿದೆ.
 
ಇಲ್ಲಿನ ಜನ-ಜಾನುವಾರು ಬವಣೆ ಹೇಳತೀರದು. ಸರ್ಕಾರ ಆದಷ್ಟು ಬೇಗ ಈ ಭಾಗದಲ್ಲಿ ಗೋಶಾಲೆ ಆರಂಭಿಸಬೇಕು ಎಂದು ಮನವಿ ಮಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.