ADVERTISEMENT

₹ 2.75 ಲಕ್ಷ ಮೊತ್ತದ ಸಾಬೂನು ತಯಾರಿಕೆ ಅಚ್ಚು ವಶ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 16:13 IST
Last Updated 15 ಜೂನ್ 2019, 16:13 IST
ಶಿವಾಜಿ
ಶಿವಾಜಿ   

ತುಮಕೂರು: ನಗರದ ವಿದ್ಯಾನಗರ ಕೈಗಾರಿಕಾ ಪ್ರದೇಶದ 4ನೇ ಕ್ರಾಸ್‌ನಲ್ಲಿರುವ ಕೈಜಾನ್ ಹೆಲ್ತ್ ಕೇರ್ ಸಾಬೂನು ಕಾರ್ಖಾನೆಯ ಕಿಟಕಿ ಕಂಬಿ ಕಿತ್ತು ಸಾಬೂನು ತಯಾರಿಸಲು ಬಳಸುವ ಅಚ್ಚು (ಡೈ ಸೆಟ್) ಕದ್ದಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ದಿಬ್ಬೂರು ಬಡಾವಣೆಯ ಶಿವಾಜಿ ಬಂಧಿತ ಆರೋಪಿಯಾಗಿದ್ದು, ₹ 2.75 ಲಕ್ಷ ಮೊತ್ತದ ಅಚ್ಚನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 2ರಂದು ಆರೋಪಿಯು ಕಳ್ಳತನ ಮಾಡಿದ್ದ. ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಸಿಪಿಐ ಟಿ.ಎಸ್. ರಾಧಾಕೃಷ್ಣ ನೇತೃತ್ವದಲ್ಲಿ ಜಯನಗರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಎಚ್.ಎಸ್. ನವೀನ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಒಳಗೊಂಡ ತಂಡವು ಡಿವೈಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ಆರೋಪಿ ಬಂಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.