ADVERTISEMENT

ಗುಬ್ಬಿ | ದನದ ಕೊಟ್ಟಿಗೆಗೆ ನುಗ್ಗಿ ಕರು ಹೊತ್ತೊಯ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 13:52 IST
Last Updated 9 ಮಾರ್ಚ್ 2025, 13:52 IST
ಫೋಟೋ 01,ಸುದ್ದಿ 01: ಕಡಬಾ ಹೋಬಳಿ ಬ್ಯಾಡಗೆರೆಯಲ್ಲಿ ಕೊಟ್ಟಿಗೆಗೆ ನುಗ್ಗಿ ಕರುವನ್ನು ಹೊತ್ತೊಯ್ದ ಚಿರತೆ
ಫೋಟೋ 01,ಸುದ್ದಿ 01: ಕಡಬಾ ಹೋಬಳಿ ಬ್ಯಾಡಗೆರೆಯಲ್ಲಿ ಕೊಟ್ಟಿಗೆಗೆ ನುಗ್ಗಿ ಕರುವನ್ನು ಹೊತ್ತೊಯ್ದ ಚಿರತೆ   

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಬ್ಯಾಡಗೆರೆ ಗ್ರಾಮದ ರೈತ ಮಹಿಳೆ ಶ್ರೀಲಕ್ಷ್ಮಿ ಅವರಿಗೆ ಸೇರಿದ ಕರುವನ್ನು ಚಿರತೆಯೊಂದು ಶನಿವಾರ ತಡರಾತ್ರಿ ಕೊಟ್ಟಿಗೆಗೆ ನುಗ್ಗಿ ತೋಟದ ಸಾಲಿಗೆ ಎಳೆದೊಯ್ದು ತಿಂದು ಹೋಗಿದೆ.

ಕೃಷಿ ಜೊತೆಗೆ ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿದ್ದ ಕುಟುಂಬವು ಚಿರತೆಯ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ರೈತರು ತೋಟಕ್ಕೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT