ADVERTISEMENT

ಆರ್ಯ ಭಾರತಿಗೆ ಉತ್ತಮ ವಿದ್ಯಾರ್ಥಿ ಘಟಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 14:55 IST
Last Updated 7 ನವೆಂಬರ್ 2018, 14:55 IST
ಪಾಲಿಟೆಕ್ನಿಕ್‌ ಪ್ರಾಧ್ಯಾಪಕ ಪ್ರಶಾಂತ್ ಕುಮಾರ್‌ ಅವರು ಪ್ರಶಸ್ತಿ ಸ್ವೀಕರಿಸಿದರು
ಪಾಲಿಟೆಕ್ನಿಕ್‌ ಪ್ರಾಧ್ಯಾಪಕ ಪ್ರಶಾಂತ್ ಕುಮಾರ್‌ ಅವರು ಪ್ರಶಸ್ತಿ ಸ್ವೀಕರಿಸಿದರು   

ತುಮಕೂರು: ಭಾರತೀಯ ತಾಂತ್ರಿಕ ಶಿಕ್ಷಣ ಸಮಾಜ (ಐಎಸ್‌ಟಿಇ) ಕರ್ನಾಟಕ ವಿಭಾಗದಿಂದ ನೀಡುವ ರಾಜ್ಯ ಮಟ್ಟದ ಉತ್ತಮ ವಿದ್ಯಾರ್ಥಿ ಘಟಕ ಪ್ರಶಸ್ತಿಯು ಎರಡನೇ ಬಾರಿಗೆ ನಗರದ ಆರ್ಯಭಾರತಿ ಪಾಲಿಟೆಕ್ನಿಕ್‌ಗೆ ಸಂದಿದೆ.

ಬೀದರ್ ಜಿಲ್ಲೆ ಬಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಐಎಸ್‌ಟಿಇ ರಾಜ್ಯ ಮಟ್ಟದ 21ನೇ ಉಪನ್ಯಾಸಕರ ಸಮ್ಮೇಳನದಲ್ಲಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಐಎಸ್‌ಟಿಇ ಅಧ್ಯಕ್ಷ ಪ್ರೊ.ಪ್ರತಾಪ್ ಕಾಕೋಸ ದೇಸಾಯಿ, ಡಾ.ಸಿ.ಕೆ.ಸುಬ್ಬರಾಯ, ಕಾರ್ಯದರ್ಶಿ ಪ್ರೊ.ನಿಜಾನಂದ ರೆಡ್ಡಿ ಪ್ರಶಸ್ತಿ ಪ್ರದಾನ ಮಾಡಿದರು.

ರಾಜ್ಯಮಟ್ಟದಲ್ಲಿಯೇ ಅತೀ ಹೆಚ್ಚು ಉತ್ತಮ ಕಾರ್ಯಚಟುವಟಿಕೆಗಳನ್ನು ಆಯೋಜಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.