ಶಿರಾ: ನಗರದ ಪ್ರೆಸಿಡೆನ್ಸಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜುಲೈ 2020ರಲ್ಲಿ ನಡೆದ ಸಿಇಟಿಯಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ.
ಟಿ.ಉದಯ್ಕುಮಾರ್ ಎಂಜಿನಿಯರಿಂಗ್ ವಿಭಾಗದಲ್ಲಿ 322ನೇ ರ್ಯಾಂಕ್, ಕೃಷಿ ವಿಜ್ಞಾನ ವಿಭಾಗದಲ್ಲಿ 36ನೇ ರ್ಯಾಂಕ್, ಪಶುವೈದ್ಯ ವಿಭಾಗದಲ್ಲಿ 47ನೇ ರ್ಯಾಂಕ್, ತರುಣ್ಕುಮಾರ್ ಎಂಜಿನಿಯರಿಂಗ್ ವಿಭಾಗದಲ್ಲಿ 457ನೇ ರಾಂಕ್, ಕೃಷಿ ವಿಜ್ಞಾನ ವಿಭಾಗದಲ್ಲಿ 60ನೇ ರ್ಯಾಂಕ್, ಪಶು ವೈದ್ಯ ವಿಭಾಗದಲ್ಲಿ 83ನೇ ರ್ಯಾಂಕ್ ಪಡೆದಿದ್ದಾರೆ.
ಕೆ.ಹರ್ಷವರ್ಧನ್ ಎಂಜಿನಿಯರಿಂಗ್ ವಿಭಾಗದಲ್ಲಿ 477ನೇ ರ್ಯಾಂಕ್, ಕೃಷಿ ವಿಜ್ಞಾನ– 65ನೇ ರ್ಯಾಂಕ್, ಪಶುವೈದ್ಯ– 81ನೇ ರ್ಯಾಂಕ್, ಅಮೃತ ವರ್ಷಿಣಿ ಎಂಜಿನಿಯರಿಂಗ್ ವಿಭಾಗದಲ್ಲಿ 611ನೇ ರ್ಯಾಂಕ್, ಕೃಷಿ ವಿಜ್ಞಾನ ವಿಭಾಗದಲ್ಲಿ 139ನೇ ರ್ಯಾಂಕ್, ಪಶುವೈದ್ಯ ವಿಭಾಗದಲ್ಲಿ 169ನೇ ರ್ಯಾಂಕ್, ಆರ್.ಶ್ರೀನಿವಾಸ್ ಎಂಜಿನಿಯರಿಂಗ್ ವಿಭಾಗದಲ್ಲಿ 641ನೇ ರ್ಯಾಂಕ್, ಕೃಷಿ ವಿಜ್ಞಾನ ವಿಭಾಗದಲ್ಲಿ 141ನೇ ರ್ಯಾಂಕ್, ಪಶು ವೈದ್ಯ ವಿಭಾಗದಲ್ಲಿ 264ನೇ ರ್ಯಾಂಕ್ ಪಡೆದಿದ್ದಾರೆ.
ಕೆ.ವಿ.ಯಶವಂತ್ ಎಂಜಿನಿಯರಿಂಗ್ ವಿಭಾಗದಲ್ಲಿ 789ನೇ ರ್ಯಾಂಕ್, ಕೃಷಿ ವಿಜ್ಞಾನ ವಿಭಾಗದಲ್ಲಿ 200ನೇ ರ್ಯಾಂಕ್, ಪಶುವೈದ್ಯ ವಿಭಾಗದಲ್ಲಿ 527ನೇ ರ್ಯಾಂಕ್, ಜಿ.ಎಸ್.ಮಾರುತಿ ಕೃಷಿವಿಜ್ಞಾನ ವಿಭಾಗದಲ್ಲಿ 275ನೇ ರ್ಯಾಂಕ್, ಪಶುವೈದ್ಯ ವಿಭಾಗದಲ್ಲಿ 497ನೇ ರ್ಯಾಂಕ್, ಡಿ.ಜಿ.ಆಕಾಶ್ ಕೃಷಿ ವಿಜ್ಞಾನ– 323ನೇ ರ್ಯಾಂಕ್, ಪಶುವೈದ್ಯ ವಿಭಾಗದಲ್ಲಿ 94ನೇ ರ್ಯಾಂಕ್, ಬಿ.ವಿ.ರಕ್ಷಿತ್ ಕೃಷಿ ವಿಜ್ಞಾನ– 493ನೇ ರ್ಯಾಂಕ್, ಪಶುವೈದ್ಯ– 280ನೇ ರ್ಯಾಂಕ್ ಹಾಗೂ ಕಾರ್ತಿಕ್ ಆರ್.ಗಣೇಶ್ ಕೃಷಿ ವಿಜ್ಞಾನ ವಿಭಾಗದಲ್ಲಿ 541ನೇ ರ್ಯಾಂಕ್ ಪಡೆದಿದ್ದಾರೆ.
ಸಿಇಟಿಯಲ್ಲಿ ಉತ್ತಮ ಸಾಧನೆಗೆ ಕಾರಣರಾದ ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಹಾಗೂ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಚಿದಾನಂದ್ ಎಂ.ಗೌಡ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.