ADVERTISEMENT

ಕುಣಿಗಲ್ | ಹಳಿ ಮೇಲೆ ಬಿದ್ದ ವಿದ್ಯುತ್‌ ತಂತಿ; 2 ತಾಸು ಮಾರ್ಗಮಧ್ಯೆ ನಿಂತ ರೈಲು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 13:53 IST
Last Updated 29 ಮಾರ್ಚ್ 2024, 13:53 IST
ಕುಣಿಗಲ್ ಸಮೀಪದ ಬೇಗೂರು ರೈಲ್ವೆ ಹಳಿಗಳ ಮೇಲೆ ತುಂಡಾಗಿ ಬಿದ್ದಿದ್ದ ತಂತಿಯನ್ನು ಸಿಬ್ಬಂದಿ ಸರಿಪಡಿಸಿದರು
ಕುಣಿಗಲ್ ಸಮೀಪದ ಬೇಗೂರು ರೈಲ್ವೆ ಹಳಿಗಳ ಮೇಲೆ ತುಂಡಾಗಿ ಬಿದ್ದಿದ್ದ ತಂತಿಯನ್ನು ಸಿಬ್ಬಂದಿ ಸರಿಪಡಿಸಿದರು   

ಕುಣಿಗಲ್: ತಾಲ್ಲೂಕಿನ ಬೇಗೂರು ಬಳಿಯ ರೈಲ್ವೆ ಹಳಿಗಳ ಮೇಲೆ ಶುಕ್ರವಾರ ವಿದ್ಯುತ್‌ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಗಳೂರಿನಿಂದ ಹಾಸನಕ್ಕೆ ಹೋಗುವ ರೈಲುಮಾರ್ಗಮಧ್ಯೆ ಎರಡು ತಾಸು ನಿಂತಿತ್ತು.

ಬೆಳಿಗ್ಗೆ 11.30ಕ್ಕೆ ಬೆಂಗಳೂರಿನಿಂದ ಹಾಸನ ಕಡೆಗೆ ರೈಲು ತೆರಳುತ್ತಿತ್ತು. ತಂತಿ ತುಂಡಾಗಿ ಬಿದ್ದ ಮಾಹಿತಿ ತಿಳಿದು ಚಾಲಕ ರೈಲನ್ನು ನಿಲ್ಲಿಸಿದ್ದರು. ಬೆಂಗಳೂರಿನಿಂದ ಬಂದ ಸಿಬ್ಬಂದಿ ವ್ಯವಸ್ಥೆ ಸರಿಪಡಿಸಿದ ನಂತರ ರೈಲು ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ಸಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT