ADVERTISEMENT

ಹುಲಿಯೂರುದುರ್ಗ: ಬಿರುಗಾಳಿ ಮಳೆಗೆ ಉರುಳಿದ ವಿದ್ಯುತ್ ಸ್ತಂಭಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2019, 14:20 IST
Last Updated 22 ಮೇ 2019, 14:20 IST
ರಾಜೇಂದ್ರಪುರದಲ್ಲಿ ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿರುವ ತೆಂಗಿನ ಮರ
ರಾಜೇಂದ್ರಪುರದಲ್ಲಿ ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿರುವ ತೆಂಗಿನ ಮರ   

ಹುಲಿಯೂರುದುರ್ಗ: ಹೋಬಳಿಯ ರಾಜೇಂದ್ರ ಪುರ ಗ್ರಾಮದಲ್ಲಿ ಬುಧವಾರ ಭಾರೀ ಬಿರುಗಾಳಿ ಮಳೆಗೆ ವಿದ್ಯುತ್ ಸ್ತಂಭಗಳು ನೆಲಕ್ಕುರುಳಿದವು, ತೆಂಗಿನ ಮರಗಳು ಬುಡ ಮೇಲಾದವು. ಮನೆ ಚಾವಣಿಯವ ಹೊದಿಕೆಗಳು ಹಾರಿ ಹೋದವು.

ತೀವ್ರವಾಗಿ ಬೀಸಿದ ಗಾಳಿ ಜೋರಾಗಿ ಸುರಿಯಬೇಕಿದ್ದ ಮಳೆಯ ಪ್ರಮಾಣವನ್ನು ಕಡಿಮೆ ಮಾಡಿತು. ಇದರಿಂದ ಜನರು ಅತೃಪ್ತಿ ವ್ಯಕ್ತಪಡಿಸಿದರು.

ಹುಲಿಯೂರುದುರ್ಗ ಸೇರಿದಂತೆ ಗೊಲ್ಲರಹಟ್ಟಿ, ಸೀಗೇಪಾಳ್ಯ, ಮಾದಪ್ಪನಹಳ್ಳಿ, ಡಿ.ಹೊಸಹಳ್ಳಿ ಸಿಂಗೋನಹಳ್ಳಿ, ವಾಜರಪಾಳ್ಯ, ಬೀಚನಹಳ್ಳಿ, ಹಳೇವೂರು, ಮೆಣಸಕೆರೆದೊಡ್ಡಿ, ನಂಜೇಗೌಡನದೊಡ್ಡಿ, ಕುಂಟಯ್ಯನಪಾಳ್ಯ ಗ್ರಾಮಗಳಲ್ಲಿ ಕೂಡ ಗಾಳಿ ಹಾಗೂ ಮಳೆಯ ಆರ್ಭಟ ಜೋರಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.