ADVERTISEMENT

ದಸರಾ ಆಚರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:17 IST
Last Updated 11 ಅಕ್ಟೋಬರ್ 2021, 2:17 IST
ತುಮಕೂರಿನಲ್ಲಿ ಜಿಲ್ಲಾ ದಸರಾ ಉತ್ಸವ ಹಾಗೂ ಧ್ವಜ ಕಂಬ ನಿರ್ಮಾಣಕ್ಕೆ ದಸರ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿ ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಪದಾಧಿಕಾರಿಗಳಾದ ಕೋರಿ ಮಂಜುನಾಥ್, ಬಿ.ಎಸ್.ಮಹೇಶ್, ಬಿ.ಎಚ್‌.ಚೇತನ್, ಎಚ್.ಕೆ.ಬಸವರಾಜು, ಕೆ.ಎನ್.ಗೋವಿಂದರಾವ್ ಇತರರು ಇದ್ದರು
ತುಮಕೂರಿನಲ್ಲಿ ಜಿಲ್ಲಾ ದಸರಾ ಉತ್ಸವ ಹಾಗೂ ಧ್ವಜ ಕಂಬ ನಿರ್ಮಾಣಕ್ಕೆ ದಸರ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್ ಚಾಲನೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿ ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಪದಾಧಿಕಾರಿಗಳಾದ ಕೋರಿ ಮಂಜುನಾಥ್, ಬಿ.ಎಸ್.ಮಹೇಶ್, ಬಿ.ಎಚ್‌.ಚೇತನ್, ಎಚ್.ಕೆ.ಬಸವರಾಜು, ಕೆ.ಎನ್.ಗೋವಿಂದರಾವ್ ಇತರರು ಇದ್ದರು   

ತುಮಕೂರು: ಜಿಲ್ಲಾ ದಸರಾ ಉತ್ಸವದ ಸಿದ್ಧತೆಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಅ. 15ರಂದು ದಸರಾ ಉತ್ಸವ ನಡೆಯಲಿದ್ದು,ಧ್ವಜ ಕಂಬ ನಿರ್ಮಾಣದ ಭೂಮಿ ಪೂಜೆಯನ್ನು ದಸರ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಈ ಬಾರಿಯ ಉತ್ಸವ ಆಯೋಜನಾ ಸಮಿ
ತಿಯ ಅಧ್ಯಕ್ಷರೂ ಆಗಿರುವ ಉದ್ಯಮಿ ಎಸ್.ಪಿ.ಚಿದಾನಂದ್ ನೆರವೇರಿಸಿದರು.

ಅ. 15ರಂದು ಶುಕ್ರವಾರ ಮಧ್ಯಾಹ್ನ 1.30 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಬ್ಬಿಯ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ಉತ್ಸವ ನಡೆಯಲಿದೆ. 80ಕ್ಕೂ ಹೆಚ್ಚು ಮುಜರಾಯಿ ಹಾಗೂ ಖಾಸಗಿ ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಟೌನ್‍ಹಾಲ್‌ನಿಂದ ಹೊರಡುವ ಮೆರವಣಿಗೆ ಎಂ.ಜಿ.ರಸ್ತೆ, ಜನರಲ್ ಕಾರ್ಯಪ್ಪ ರಸ್ತೆಯ ಮೂಲಕ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ.

ADVERTISEMENT

ಶಾಸಕ ಜಿ.ಬಿ.ಜ್ಯೋತಿಗಣೇಶ್ ಧ್ವಜ ಪೂಜೆ, ವರದಾಯಿನಿ ಸೇವಾ ಟ್ರಸ್ಟ್‌ನ ಗಾಯಿತ್ರಿ ನಾರಾಯಣ್ ಗಣಪತಿ ಪೂಜೆ
ನೆರವೇರಿಸುವರು. ಮೇಯರ್ ಬಿ.ಜಿ.ಕೃಷ್ಣ
ಪ್ಪ ಮೆರವಣಿಗೆಗೆ ಚಾಲನೆ ನೀಡುವರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಪಿ.ಚಿದಾನಂದ್, ‘ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಜಿಲ್ಲಾ ದಸರಾ ಉತ್ಸವ ನಡೆಯುತ್ತಾ ಬಂದಿದ್ದು, ಪ್ರತಿ ವರ್ಷವೂ ಒಂದೊಂದು ಸಮುದಾಯಕ್ಕೆ ಸೇರಿದ ಧರ್ಮಗುರುಗಳನ್ನು ಕರೆಸಿ, ಅವರ ನೇತೃತ್ವದಲ್ಲಿ ದಸರ ಉತ್ಸವದ ಮೆರವಣಿಗೆ, ಸಾಮೂಹಿಕ ಶಮಿ ಪೂಜೆನೆರವೇರಿಸಿಕೊಂಡು ಬರಲಾಗಿದೆ. ಈ ಬಾರಿ ಬೆಂಗಳೂರಿನ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಭಾಗವಹಿಸುವರು’ ಎಂದು ಹೇಳಿದರು.

ಸಾರ್ವಜನಿಕ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಮಹಿಳಾ ಸಮನ್ವಯ ಸಮಿತಿಯ ತೇಜಶ್ವಿನಿ ವಿನಾಯಕ್, ಓಂಕಾರೇಶ್ವರಿ ನಾಗರಾಜು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆ ಬಾರದಂತೆ ಪ್ರಾರ್ಥಿಸಿ ಶ್ರೀರಾಮ ಮಂದಿರದಲ್ಲಿ ದುರ್ಗಾ ಹೋಮ, ಗಣಪತಿ ಹೋಮ, ಶಾಂತಿ ಹೋಮವನ್ನು ದಸರಾ ಸಮಿತಿಯಿಂದ ನೆರವೇರಿಸಲಾಗಿದೆ ಎಂದರು.

ಶಾಸಕ ಜಿ.ಬಿ.ಜೋತಿ ಗಣೇಶ್, ‘ಉತ್ಸವ ಮೂರ್ತಿಗಳ ಮೆರವಣಿಗೆ, ಸಾಮೂಹಿಕ ಶಮಿಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ದಸರಾ ಸಮಿತಿ ಗೌರವಾಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿಯ ಕೋರಿ ಮಂಜುನಾಥ್, ಕಾರ್ಯದರ್ಶಿ ಬಿ.ಎಸ್.ಮಹೇಶ್, ಸಹಕಾರ್ಯದರ್ಶಿ ಬಿ.ಎಚ್‌.ಚೇತನ್, ಎಚ್.ಕೆ.ಬಸವರಾಜು, ಸಂಯೋ
ಜಕರಾದ ಕೆ.ಎನ್.ಗೋವಿಂದರಾವ್, ಖಜಾಂಚಿ ಬಸವರಾಜು, ದಸರಾ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ವಿಶ್ವನಾಥ್, ಗುರುಕುಲ ಮಲ್ಲಿಕಾರ್ಜುನ್, ನಾಟಕ ಅಕಾಡೆಮಿ ಸದಸ್ಯ ಟಿ.ಎಸ್.ಸದಾಶಿವಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.