ಪಾವಗಡ: ತಾಲ್ಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದ ಒಂದೇ ಕುಟುಂಬದ ಮೂವರು ಆಂಧ್ರಪ್ರದೇಶದ ಪೆರೂರು ಜಲಾಶಯದಲ್ಲಿ ಮುಳುಗಿ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ನಾಗರಾಜು (45), ಸಹೋದರ ರಾಮಾಂಜಿ (28), ನಾಗರಾಜು ಪುತ್ರಿ ರಕ್ಷಾ (15) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ರಾಮಗಿರಿ ಮಂಡಲಂನ ಪೆರೂರು ಜಲಾಶಯಕ್ಕೆ ಮೀನು ಹಿಡಿಯಲು ಹೋಗಿದ್ದಾಗ ಘಟನೆ ನಡೆದಿದೆ.
ಗಾಳ ಹಾಕಿ ಮೂವರು ಮೀನು ಹಿಡಿಯುತ್ತಿದ್ದಾಗ ರಕ್ಷಾ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ತಮಗೆ ಈಜು ಬರುವುದಿಲ್ಲ ಎನ್ನುವುದನ್ನು ಮರೆತು ಮಗಳನ್ನು ರಕ್ಷಿಸಲು ನಾಗರಾಜು ಮತ್ತು ರಕ್ಷ ಚಿಕ್ಕಪ್ಪ ರಾಮಾಂಜಿ ಜಲಾಶಯಕ್ಕೆ ಜಿಗಿದಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯ ಸಹಾಯದೊಂದಿಗೆ ಮೃತ ದೇಹಗಳನ್ನು ಹೊರ
ತೆಗೆದಿದ್ದಾರೆ.
ವೆಂಕಟಮ್ಮನಹಳ್ಳಿ, ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ನಾಗರಾಜು ಕುಟುಂಬ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ವಲಸೆ ಹೋಗಿತ್ತು. ಯುಗಾದಿ ಹಬ್ಬಕ್ಕಾಗಿ ತಮ್ಮ ಊರಿಗೆಬಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.