ADVERTISEMENT

‘ಗುಂಡಿ ಮುಚ್ಚಲು ಚಾಕೋಲೆಟ್ ಹಣ ಕೊಡುವೆ’ ಸಿಎಂ ಬೊಮ್ಮಾಯಿಗೆ ಬಾಲಕಿಯ ಮನವಿ!

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 2:49 IST
Last Updated 27 ಅಕ್ಟೋಬರ್ 2021, 2:49 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ತುಮಕೂರು: ರಸ್ತೆ ಗುಂಡಿ ಮುಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಪಟೂರು ನಗರದ 8 ವರ್ಷದ ಬಾಲಕಿ ಎನ್.ಧವನಿ ಮನವಿ ಮಾಡಿದ್ದು, ಉಳಿತಾಯದ ಹಣ ಕೊಡುವುದಾಗಿ ಹೇಳಿಕೊಂಡಿದ್ದಾರೆ.

ರಸ್ತೆಗಳ ಗುಂಡಿ ಮುಚ್ಚಿಸಿ, ಜನರ ಜೀವ ಉಳಿಸುವಂತೆ ಮನವಿ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

‘ರಸ್ತೆಗಳ ಗುಂಡಿ ನೋಡಿದರೆ ಭಯವಾಗುತ್ತದೆ. ಹಲವರು ಬಿದ್ದು ಸತ್ತು ಹೋಗಿದ್ದಾರೆ. ಇಂತಹ ರಸ್ತೆಗಳಲ್ಲಿ ಅಪ್ಪ ಮನೆಗೆ ಹೇಗೆ ಬರುತ್ತಾರೆ ಎಂದು ಭಯ
ವಾಗುತ್ತದೆ’ ಎಂದು ಬಾಲಕಿ ವಿಡಿಯೊದಲ್ಲಿ ಆತಂಕ ತೋಡಿಕೊಂಡಿದ್ದಾರೆ.

ADVERTISEMENT

‘ನಿಮ್ಮ ಬಳಿ ಹಣ ಇಲ್ಲದಿದ್ದರೆ, ನಾನು ಕೊಡುತ್ತೇನೆ. ಚಾಕೋಲೆಟ್‌ಗೆ ಅಪ್ಪ ಕೊಟ್ಟಿದ್ದ ಹಣ ನನ್ನ ಬಳಿ ಇದೆ. ಅದನ್ನೇ ಕೊಡುತ್ತೇನೆ. ಮೊದಲು ಗುಂಡಿ ಮುಚ್ಚಿಸಿ, ಜನರ ಪ್ರಾಣ ಕಾಪಾಡಿ’ ಎಂದು ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.