ADVERTISEMENT

ಉಡುಪಿ: ನ್ಯಾಯಾಲಯದೊಳಗೆ ಹಲ್ಲೆ; ದೂರು ಪ್ರತಿದೂರು ದಾಖಲು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 5:51 IST
Last Updated 6 ಮಾರ್ಚ್ 2022, 5:51 IST
ಹಲ್ಲೆ ಘಟನೆಯ ಬಳಿಕ ಕೋರ್ಟ್‌ ಮುಂಭಾಗ ಜಮಾಯಿಸಿದ್ದ ವಕೀಲರು ಹಾಗೂ ಪೊಲೀಸರು.
ಹಲ್ಲೆ ಘಟನೆಯ ಬಳಿಕ ಕೋರ್ಟ್‌ ಮುಂಭಾಗ ಜಮಾಯಿಸಿದ್ದ ವಕೀಲರು ಹಾಗೂ ಪೊಲೀಸರು.   

ಉಡುಪಿ: ಅಪಘಾತ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಬಂದಿದ್ದ ಶಾಹಿದ್ ಎಂಬುವರು ಜಿಲ್ಲಾ ನ್ಯಾಯಾಲಯದೊಳಗೆಯೇ ವಕೀಲ ಗುರುರಾಜ್‌ ಮೇಲೆ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಶಾಹಿದ್ ಮೇಲೆ ಕೋರ್ಟ್‌ನಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸಾಕ್ಷಿದಾರ ಶಾಹಿದ್ ಹಾಗೂ ವಕೀಲ ಗುರುರಾಜ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಘಟನೆ ವಿವರ:ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಂದಿದ್ದ ಶಾಹಿದ್ ಹಾಗೂ ವಕೀಲ ಗುರುರಾಜ್ ನಡುವೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ಪರಸ್ಪರ ಹಲ್ಲೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.