ADVERTISEMENT

ಉಚ್ಚಿಲ ಅಪಘಾತ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:08 IST
Last Updated 16 ಸೆಪ್ಟೆಂಬರ್ 2022, 4:08 IST
ಸಮರ್ಥ
ಸಮರ್ಥ   

ಪಡುಬಿದ್ರಿ: ಸೆ.14ರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಎದುರು ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬೆಳಗಾವಿ ಹುಕ್ಕೇರಿ ಮೂಲದ ಸಮರ್ಥ ಪೋದ್ದಾರ (13) ಗುರುವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಸಮರ್ಥ ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಲ್ಲಿ ಓದುತ್ತಿದ್ದು, ರಜೆಯ ಮೇಲೆ ಊರಿಗೆ ತೆರಳಿದ್ದ. ತಂದೆ ಪ್ರಭಾಕರ ಪೋದ್ದಾರ ಅವರೊಂದಿಗೆ ಶಾಲೆಗೆ ಮರಳಲು ಬಂದಿದ್ದು. ರಾತ್ರಿ ಬಸ್ಸಿನಲ್ಲಿ ಊರಿಂದ ಬಂದಿದ್ದು ಉಚ್ಚಿಲದ ಮಹಾಲಕ್ಷ್ಮೀ ಶಾಲೆಯ ಬಳಿ ತಂದೆ, ಮಗ ಬಸ್ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದ ವೇಳೆ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಸಾಗುತ್ತಿದ್ದ ಅಪರಿಚಿತ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡಿದಿತ್ತು. ಈ ಅಪಘಾತದಲ್ಲಿ ತಂದೆ ಪ್ರಭಾಕರ ಪೋದ್ದಾರ ಸ್ಥಳದಲ್ಲೇ ಮೃತಪಟ್ಟಿದ್ದರು.

ಸಮರ್ಥ್ ನಿಧನದ ಕಾರಣ ಶಾಲೆಗೆ ರಜೆ ಘೋಷಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.