ADVERTISEMENT

ನಕಲಿ ಮತದಿಂದ ಗೆಲ್ಲುತ್ತಿದ್ದ ಹೊರಟ್ಟಿ: ಎಎಪಿ ಬೆಂಬಲಿತ ಅಭ್ಯರ್ಥಿ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 15:52 IST
Last Updated 4 ಜೂನ್ 2022, 15:52 IST
ವಿ.ಆರ್.ಗೋವಿಂದ ಗೌಡ್ರ
ವಿ.ಆರ್.ಗೋವಿಂದ ಗೌಡ್ರ   

ಶಿರಸಿ: ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಮತಪಟ್ಟಿಯಲ್ಲಿ ಐದು ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಹೆಸರುಗಳಿದ್ದವು. ಈ ಬಾರಿ ಅವು ಪಟ್ಟಿಯಿಂದ ತೆಗೆಯಲ್ಪಟ್ಟಿದ್ದರಿಂದ ಸೋಲಿನ ಭಯಕ್ಕೆ ಬಿದ್ದು ಬಸವರಾಜ ಹೊರಟ್ಟಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ವಿ.ಆರ್.ಗೋವಿಂದ ಗೌಡ್ರ ಆರೋಪಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ನಾಲ್ಕುದಶಕದಿಂದಈಕ್ಷೇತ್ರಪ್ರತಿನಿಧಿಸುತ್ತಿದ್ದಹೊರಟ್ಟಿ ರಾಜಕೀಯವಾಗಿ ಬೆಳೆಸಿದ ಪಕ್ಷ ಬಿಟ್ಟು ಅಧಿಕಾರದ ಆಸೆಗೆ ಪಕ್ಷಾಂತರ ಮಾಡಿದ್ದಾರೆ‌. ಶಿಕ್ಷಕರನ್ನುತಮ್ಮಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಲು ವಿಐಪಿ ಸಂಸ್ಕೃತಿಯನ್ನು ಪಾಲಿಸುತ್ತಿದ್ದಾರೆ’ ಎಂದರು.

‘ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ಪೈಪೋಟಿ ಎಂಬುದು ಸುಳ್ಳು. ಇದರ ಹೊರತಾಗಿ ಮೂರನೆ ಶಕ್ತಿ ಗೆಲುವು ಸಾಧಿಸಲಿ ಎಂಬ ಇಚ್ಚೆ ಶಿಕ್ಷಕ ಮತದಾರರಲ್ಲಿದೆ’ ಎಂದರು.

ADVERTISEMENT

‘ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಶೀಘ್ರವೇ ನೇಮಕಾತಿ ಮಾಡಲು ಪ್ರಯತ್ನಿಸುವೆ. ಪ್ರಾಥಮಿಕ ಶಾಲೆ ಶಿಕ್ಷಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರನ್ನು ಮತಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸಲಾಗುವುದು. ಪ್ರತಿನಿತ್ಯ ಏಳು ಸಾವಿರ ಶಿಕ್ಷರೊಂದಿಗೆ ಸಂವಹನ ಸಾಧಿಸಲಾಗುತ್ತಿದೆ. ಅವರ ಸಮಸ್ಯೆಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಲಾಗುತ್ತಿದೆ’ ಎಂದರು.

ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ವೀರಭದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ಆಕಾಶ ಕೊಂಡ್ಲಿ, ರೂಪಾ ಶಿರ್ಸಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.