ಶಿರಸಿ: ಪರವಾನಗಿ ಇಲ್ಲದೆ ಒಂಟಿ ನಳಿಕೆಯ ಬಂದೂಕು ಇಟ್ಟುಕೊಂಡಿದ್ದ ಆರೋಪದಡಿ ತಾಲ್ಲೂಕಿನ ಓಣಿ ವಿಘ್ನೇಶ್ವರ ಕ್ರಾಸ್ ಸಮೀಪದ ನವಿಲಗಾರಿನ ವ್ಯಕ್ತಿಯೊಬ್ಬರನ್ನು ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾರೆ.
ಹತ್ತರಗಿಯ ಅಣ್ಣಪ್ಪ ಚಲವಾದಿ (38) ಬಂಧಿತ ಆರೋಪಿ. ಅವರ ಜತೆಗಿದ್ದ ಇನ್ನೊಬ್ಬ ಆರೋಪಿ ಸಂತೋಷ ನಾಯ್ಕ (38) ಪರಾರಿಯಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.