ಕಾರವಾರ: ಕೆಲವು ದಿನಗಳ ಬಿಡುವಿನ ನಂತರ ಜಿಲ್ಲೆಯ ವಿವಿಧೆಡೆ ಮತ್ತೆ ಮಳೆಯಾಗುತ್ತಿದೆ. ಗುರುವಾರ ನಸುಕಿನಿಂದಲೇ ಬಿಡದೇ ಜಿಟಿಜಿಟಿ ಹನಿಗಳು ಬೀಳುತ್ತಿವೆ.
ಆಗಾಗ ಗುಡುಗು ಕೂಡ ಜೊತೆಯಾಗಿದೆ. ಬೆಳಿಗ್ಗೆ ಮಳೆ ಬಂದು ಬಿಡಬಹುದು ಎಂದು ಊಹಿಸಿದ್ದ ಹಲವರು ಕೊಡೆ, ರೇನ್ ಕೋಟ್ ತೆಗೆದುಕೊಳ್ಳದೇ ಮನೆಗಳಿಂದ ಹೊರ ಬಂದಿದ್ದರು. ಆದರೆ, ಮಳೆ ನಿಲ್ಲದ ಕಾರಣ ನೆನೆದುಕೊಂಡೇ ಸಾಗಿದರು.
ಇದೇರೀತಿ, ಭಟ್ಕಳ, ಹೊನ್ನಾವರ ತಾಲ್ಲೂಕುಗಳ ವಿವಿಧೆಡೆ ಕೂಡ ನಿರಂತರ ಮಳೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.