ADVERTISEMENT

'ದೇಶ ರಕ್ಷಣೆಯಲ್ಲಿ ಯೋಧರ ಪಾತ್ರ ಹಿರಿದು'

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:22 IST
Last Updated 5 ಜೂನ್ 2025, 14:22 IST
ಹೊರ್ತಿ ಸಮೀಪದ ದೇಗಿನಾಳ ಗ್ರಾಮದ ಸಿಆರ್‌ಪಿಎಫ್ ಯೋಧ ಗೌರಿಶಂಕರ್ ಅ. ನೀಲಂಗಿ ತೆರೆದ ವಾಹನದಲ್ಲಿ  ಮೆರವಣಿಗೆ ನಡೆಸಲಾಯಿತು
ಹೊರ್ತಿ ಸಮೀಪದ ದೇಗಿನಾಳ ಗ್ರಾಮದ ಸಿಆರ್‌ಪಿಎಫ್ ಯೋಧ ಗೌರಿಶಂಕರ್ ಅ. ನೀಲಂಗಿ ತೆರೆದ ವಾಹನದಲ್ಲಿ  ಮೆರವಣಿಗೆ ನಡೆಸಲಾಯಿತು   

ಹೊರ್ತಿ: ದೇಶ ರಕ್ಷಣೆಯಲ್ಲಿ ಯೋಧರ ಪಾತ್ರ ಹಿರಿದು ಎಂದು ದೇಗಿನಾಳ ಗ್ರಾಮದ ಮಹಾಲಕ್ಷ್ಮಿ ಕಮಿಟಿ ಅಧ್ಯಕ್ಷ  ರಮೇಶಗೌಡ ಬಿರಾದಾರ ಹೇಳಿದರು.

ಸಮೀಪದ ದೇಗಿನಾಳ ಗ್ರಾಮದ ಸಿಆರ್‌ಪಿಎಫ್ (ರ್‍ಯಾಪಿಡ್ ಆಕ್ಷನ್ ಫೋರ್ಸ್)ನ ಯೋಧ ಗೌರಿಶಂಕರ್ ಅ.ನೀಲಂಗಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮ ದೇಗಿನಾಳಕ್ಕೆ ಮಂಗಳವಾರ ಆಗಮಿಸಿದ ಅವರನ್ನು ಗ್ರಾಮದ ಮಾಜಿ ಸೈನಿಕರ ಗೆಳೆಯರ ಬಳಗ ಹಾಗೂ ಜೈ ಜವಾನ್ ಜೈ ಕಿಸಾನ್ ಸಂಘ ಮತ್ತು ಗ್ರಾಮಸ್ಥರು ಸ್ವಾಗತ ಕೋರಿ ಗ್ರಾಮದ ರಾಜ ಮಾರ್ಗದಲ್ಲಿ ಅದ್ದೂರಿಯ ಮೆರವಣಿಗೆ ನಡೆಸಿದರು.

ADVERTISEMENT

ಕಾರ್ಯಕ್ರಮ ಉಸ್ತುವಾರಿಯನ್ನು ದೇಗಿನಾಳ ಗ್ರಾಮದ ಜೈ ಕರ್ನಾಟಕ ಅಧ್ಯಕ್ಷ ಪ್ರಶಾಂತ ಕೋಳಿ ವಹಿಸಿದ್ದರು. ಈ ಮೆರವಣಿಗೆಯಲ್ಲಿ ಉಮಾಕಾಂತ ಕಾಶೆಟ್ಟಿ. ನಾಗಪ್ಪ ಎಡಿಗಿ, ಮಾರುತಿ ಬಿರಾದಾರ, ರಾಜಕುಮಾರ ನೀಲಂಗಿ, ಗುರುಬಸಯ್ಯ ಹಿರೇಮಠ, ಖಂಡು ಜಾಧವ, ಶಿವಾಜಿ ಜಾಧವ, ವಿಶ್ವನಾಥ ಜಂಗಮಶೆಟ್ಟಿ ಸೇರಿದಂತೆ ಹಾಲಿ ಹಗೂ ಮಾಜಿ ಸೈನಿಕರು ಮತ್ತು ಶಾಲಾ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.

ಹೊರ್ತಿ:ಸಮೀಪದ ದೇಗಿನಾಳ ಗ್ರಾಮದ ಸಿಆರ್‍ ಪಿಎಫ್ (ರ್‍ಯಾಪಿಡ್ ಆಕ್ಷನ್ ಫೋರ್ಸ್) ನ ಯೋಧ ಗೌರಿಶಂಕರ್ ಅ.ನೀಲಂಗಿ ಇವರು 40ವರ್ಷ ಸುದೀರ್ಗ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮ ದೇಗಿನಾಳಕ್ಕೆ ಮಂಗಳವಾರ ಆಗಮಿಸಿದ ಇವರನ್ನು ಗ್ರಾಮದ ಮಾಜಿ ಸೈನಿಕರ ಗೆಳೆಯರ ಬಳಗ ಹಾಗೂ ಜೈ ಜವಾನ್ ಜೈ ಕಿಸಾನ್ ಸಂಘ ಮತ್ತು ಶಾಲಾ ಮಕ್ಕಳು​ಗ್ರಾಮಸ್ಥರು ಭವ್ಯ ಸ್ವಾಗತ ಕೋರಿ ಗ್ರಾಮದ ರಾಜ ಮಾರ್ಗದಲ್ಲಿ ಅದ್ದೂರಿಯ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.