ADVERTISEMENT

ಕ್ರೀಡಾಪಟುಗಳಿಗೆ ಪ್ರೇಮಾನಂದ ನೆರವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 12:41 IST
Last Updated 7 ಡಿಸೆಂಬರ್ 2022, 12:41 IST
ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅವರು ಕ್ರೀಡಾಪಟುಗಳಿಗೆ ಜೆರ್ಸಿ ವಿತರಿಸಿದರು
ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಅವರು ಕ್ರೀಡಾಪಟುಗಳಿಗೆ ಜೆರ್ಸಿ ವಿತರಿಸಿದರು   

ವಿಜಯಪುರ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಡೆಯಲಿರುವ 2022–23ನೇ ಸಾಲಿನ ರಾಜ್ಯ ಮಟ್ಟದ ವಾಲಿಬಾಲ್‌ ಮತ್ತು ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಜಿಲ್ಲೆಯ ಕ್ರೀಡಾಪಟುಗಳಿಗೆಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಜೆರ್ಸಿ ಕೊಡುಗೆಯಾಗಿ ನೀಡಿದ್ದಾರೆ.

ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಪ್ರೇಮಾನಂದ ಬಿರಾದಾರ ಅವರು ₹ 12 ಸಾವಿರ ಮೊತ್ತದ ಜೆರ್ಸಿ ಕೊಡಿಸುವ ಮೂಲಕಪ್ರೋತ್ಸಾಹಿಸಿದ್ದಾರೆ.

‘ವಿದ್ಯಾರ್ಥಿಗಳು ಉತ್ತಮ ಆಟವಾಡಿ, ಬಹುಮಾನ ತರುವ ಮೂಲಕ ಜಿಲ್ಲೆಗೆ, ಕಾಲೇಜಿಗೆ, ಪೋಷಕರಿಗೆ ಹೆಸರು ತರಬೇಕು’ ಎಂದುಪ್ರೇಮಾನಂದ ಬಿರಾದಾರ ಅವರು ತಂಡಕ್ಕೆ ಶುಭ ಕೋರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.