ADVERTISEMENT

ವಿವಿಧೆಡೆ ಮಳೆ: ಸಂತೆ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 13:38 IST
Last Updated 13 ಸೆಪ್ಟೆಂಬರ್ 2021, 13:38 IST
ವಿಜಯಪುರ ನಗರದಲ್ಲಿ ಸೋಮವಾರ ಸುರಿಯುವ ಮಳೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ತೆರಳಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಸೋಮವಾರ ಸುರಿಯುವ ಮಳೆಯಲ್ಲಿ ಶಾಲಾ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ತೆರಳಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ದೇವರ ಹಿಪ್ಪರಗಿ, ಸಿಂದಗಿ, ಬಸವನ ಬಾಗೇವಾಡಿ, ತಿಕೋಟಾ ಭಾಗದಲ್ಲಿ ಸೋಮವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಜೊತೆಗೆ ಆಗಾಗ ಧಾರಾಕಾರ ಮಳೆ ಸುರಿಯಿತು.

ದೇವರಹಿಪ್ಪರಗಿ ಪಟ್ಟಣದಲ್ಲಿ ಸಂತೆ ದಿನವಾದ ಸೋಮವಾರ ಮಧ್ಯಾಹ್ನದಿಂದಲೇ ಆರಂಭಗೊಂಡ ಮಳೆಯಿಂದ ಗ್ರಾಮೀಣ ಪ್ರದೇಶದ ತರಕಾರಿ ಹಾಗೂ ಕಾಳು ಮಾರಾಟಗಾರರು ತೊಂದರೆ ಅನುಭವಿಸುವಂತಾಯಿತು.

ಎರಡು ಗಂಟೆಗಳ ಕಾಲ ಆಗಾಗ ಸುರಿದ ಮಳೆ ತರಕಾರಿ ಬೆಲೆ ಇಳಿಮುಖವಾಗಲು ಕಾರಣವಾಯಿತು. ಇದರಿಂದ ಮಾರಾಟಗಾರರು ನಷ್ಟ ಅನುಭವಿಸಿದರು. ಬೆಳಿಗ್ಗೆ ಕೆ.ಜಿ.ಯೊಂದಕ್ಕೆ ₹10 ರಿಂದ ₹ 20 ಬೆಲೆಯಿದ್ದ ಟೊಮೆಟೊ, ಬಟಾಟೆ, ಸೊಪ್ಪು ಮಳೆ ಆರಂಭವಾಗುತ್ತಿದ್ದಂತೆಯೇ ಅರ್ಧ ಬೆಲೆಗೆ ಮಾರಾಟವಾದವು.

ADVERTISEMENT

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿರುವ ಗಣೇಶ ದರ್ಶನಕ್ಕೂಮಳೆಯಿಂದ ಭಕ್ತರಿಗೆ ಅಡಚಣೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.