ವಿಜಯಪುರ: ನಗರದ ವಿಠ್ಠಲ ಮಂದಿರದಲ್ಲಿ ಶುಕ್ರವಾರ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು.
ಸಂಜೆ ಭಜನೆ ನೆರವೇರಿತು. ಮಧ್ಯರಾತ್ರಿ ಬಾಲ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಪದಗಳನ್ನು ಹಾಡಿದರು. ಬೆಳಗಿನ ಜಾವದವರೆಗೂ ಭಜನೆ, ಸಂಕೀರ್ತನೆಗಳು ಜರುಗಿದವು.
ವಿಠ್ಠಲ ಮಂದಿರ ಟ್ರಸ್ಟ್ ಸಮಿತಿ ಕಾರ್ಯದರ್ಶಿ ದೇವಕಾಂತ ಬಿಜ್ಜರಗಿ, ಶಂಕರ ಕೋರಿ, ಅಶೋಕ ಗರಸಂಗಿ, ಪಾಂಡು ಯಾದವಾಡ, ಅನೀಲ ಚಾವರ, ಅರ್ಜುನ ಪೂಜಾರಿ, ಸುರೇಶ ಪೂಜಾರಿ, ಶಿವಪ್ಪ ಘಂಟಿ, ದತ್ತು ಘಂಟಿ, ಪ್ರಕಾಶ ಹುಂಡೆಕಾರ, ರಾಮು ಜೋಗಣ್ಣವರ ಇದ್ದರು.
ತೊಟ್ಟಿಲ ಕಾರ್ಯಮವನ್ನು ಮಂದಿರದ ಟ್ರಸ್ಟಿಗಳಾದ ಶೈಲಾ ಬಿಜ್ಜರಗಿ, ಸುಭದ್ರ ಪ್ರೂಜಾರಿ ನೇತೃತ್ವ ತಂಡ ನಡೆಸಿಕೊಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.