ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದ ಸುಲಿಗೆ ಮತ್ತು ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ, ₹7.25 ಲಕ್ಷ ಮೌಲ್ಯದ 140.5 ಗ್ರಾಂ ಚಿನ್ನಾಭರಣವನ್ನು ಆದರ್ಶನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯಪುರ ನಗರದ ಶಿವಾಜಿ ಚೌಕ ಹತ್ತಿರ ಡೊಬಳೆ ಗಲ್ಲಿಯ ಅಂಬಾಜಿ ಭೊಸ್ಲೆ(24), ಜೋರಾಪೂರ ಪೇಠದ ಗೊಂದಳಿ ಗಲ್ಲಿಯ ಅರ್ಜುನ ಕಾಳೆ(24) ಮತ್ತು ಖಾಜಾನಗರದಅಬೂಬಕರ ಮದಾರ(25) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಎಚ್.ಡಿ.ಆನಂದಕುಮಾರ್ ತಿಳಿಸಿದ್ದಾರೆ.
ಆದರ್ಶನಗರ ಠಾಣೆಪಿ.ಎಸ್.ಐ.ಎಸ್.ಸಿ.ಗುರುಬೆಟ್ಟಿ,ಎಎಸ್ಐ ಪಿ ಆರ್ ಹಿಪ್ಪರಗಿ,ಸಿಬ್ಬಂದಿಗಳಾದ ಡಿ ಎಚ್ ಬೈರಗೊಂಡ, ಎಲ್. ಆರ್. ರಜಪೂತ, ಪುಂಡಲಿಕ ಬಿರಾದಾರ, ಎಸ್. ಜಿ. ಗಾಯನ್ನವರ, ಮಹೇಶ ಸಾಲಿಕೇರಿ, ಜೆ. ಎಸ್. ವನಜಕರ, ಆನಂದ ಕಂಬಾರ, ಆನಂದಯ್ಯಾ ವಿ. ಪೂಜಾರಿ, ರಮೇಶ ಬಾಡಗಿ, ಎಸ್. ಜಿ. ಪ್ರಭುಗೌಡ, ಎಸ್. ಎಸ್. ದಡ್ಡಿ, ಬಿ. ಎಂ. ರೋಣಿಹಾಳ, ಎಸ್. ಎಸ್. ಮಸಳಿ, ನಿಂಗಪ್ಪ ವಠಾರ ಕಳ್ಳರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.