ಚಡಚಣ: ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಭೀಮಾ ನದಿಗೆ ಉರುಳಿದ ಘಟನೆ ತಾಲ್ಲೂಕಿನ ಉಮರಾಣಿ ಬಳಿಯ ಉಮರಾಣಿ - ಲವಗಿ ಬಾಂದಾರ ಕಮ್ ಬ್ರಿಜ್ ಮೇಲೆ ಸೋಮವಾರ ನಡೆದಿದೆ.
ನೆರೆಯ ಮಹಾರಾಷ್ಟ್ರದ ಸಾದೇಪುರ ಗ್ರಾಮದ ಅಗಸರ ಎಂಬುವವರಿಗೆ ಸೇರಿದ ಕಬ್ಬನ್ನು ಹಾವಿನಾಳದ ಇಂಡಿಯನ್ ಶುಗರ್ಸ್ ಕಾರ್ಖಾನೆಗೆ ಸಾಗಾಟ ಮಾಡಲಾಗುತ್ತಿತ್ತು. ಟ್ರಾಕ್ಟರ್ ಭೀಮಾನದಿಯ ಉಮರಾಣಿ ಲವಗಿ ಬ್ಯಾರೇಜ್ ಮೇಲೆ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಚಾಲಕ ಈಜಿ ದಡ ಸೇರಿದ್ದಾನೆ. ಕಬ್ಬು ಹಾಗೂ ಟ್ರಾಕ್ಟರ್ ಇಂಜಿನ್, ಟ್ರೈಲರ್ ಗಳು ನದಿಯಲ್ಲಿ ಮುಳುಗಿವೆ.
ಘಟನೆಯಿಂದ ಬ್ಯಾರೇಜ್ ಮೇಲೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಬ್ಯಾರೇಜ್ ಮೇಲೆ ಅಧಿಕ ಭಾರದ ಸಾಗಾಟ, ಬೃಹತ್ ವಾಹನಗಳ ಸಂಚಾರ ನಿಷೇಧವಿದ್ದರೂ ಸಂಚಾರ ಮಾಡೋದು ಎಗ್ಗಿಲ್ಲದೇ ನಡೆದಿದೆ. ಈಚೆಗೆ ಪ್ರವಾಹ ಸಂದರ್ಭದಲ್ಲಿ ಬಾಂದಾರದ ತಡೆಗೋಡೆಗಳು ಕಿತ್ತು ಹೋಗಿದ್ದವು. ರೈತರೇ ಇದನ್ನು ದುರಸ್ತಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.