ಕಾಳಗಿ: ‘ಮಕ್ಕಳು ವಿವೇಕಾನಂದ, ರಾಧಕೃಷ್ಣ, ಲಾಲಾ ಲಜಪತರಾಯ್, ಅಬುಲ್ ಕಲಾಂ, ಭಗತ್ ಸಿಂಗ್ ರಂತಹ ಮಹಾನ ನಾಯಕರ ಜೀವನ ಮೌಲ್ಯಗಳನ್ನು ಅನುಕರಣೆ ಮಾಡುವುದರಿಂದ ಉತ್ತಮ ಪ್ರಜೆಗಳಾಗಲು ಸಾಧ್ಯ’ ಎಂದು ಶಾಂತೇಶ್ವರ ಮಠದ ಡಾ.ಶಾಂತ ಸೋಮನಾಥ ಶಿವಾಚಾರ್ಯರು ಹೇಳಿದರು.
ಅವರು, ಈಚೆಗೆ ತೆಂಗಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು.
ಉದ್ಘಾಟಿಸಿದ ತಾ.ಪಂ.ಮಾಜಿ ಅಧ್ಯಕ್ಷ ಪಂಡಿತರಾವ ಭೇರನ್, ಉಪನ್ಯಾಸಕ ರೇವಣಸಿದ್ದಪ್ಪ ದುಕಾನ್ ಮಾತನಾಡಿ, ವಿದ್ಯಾರ್ಥಿಗಳು ಯಾವಾ ಗಲೂ ಬೇರೆಯವರ ಏಳ್ಗೆಗೆ ಸಹಾಯ ಮಾಡಬೇಕೆ ಹೊರತು, ಅವರ ಏಳಿಗೆ ಕಂಡು ಕಾಲೆಳೆಯುವ ಪ್ರಯತ್ನ ಮಾಡಬಾರದು’ ಎಂದರು.
ಎಂಜಿನಿಯರ್ ಪರಮೇಶ್ವರ ಪಾಟೀಲ, ನಿತ್ಯಾನಂದ ಮಾತನಾಡಿದರು. ಮುಖ್ಯಶಿಕ್ಷಕ ರವೀಂದ್ರ ರೆಡ್ಡಿ ವಾರ್ಷಿಕ ವರದಿ ಓದಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.