ನಾರಾಯಣಪುರ: ಶ್ರೀ ತುಳಜಾಭವಾನಿ ಮತ್ತು ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜೂನ್.6 ರಂದು ಉಚಿತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮ ಯಶಸ್ವಿಗೆ ಸಮಾಜ ಬಾಂಧವರು ಶ್ರಮಿಸಬೇಕೆಂದು ಆಲ್ ಇಂಡಿಯಾ ಬಂಜಾರ ಸಂಘದ ತಾಲ್ಲೂಕಾಧ್ಯಕ್ಷ ಶೇಖರ ನಾಯ್ಕ್ ಹೇಳಿದರು.
ಸಮೀಪದ ಮಾರನಾಳ ದೊಡ್ಡ ತಾಂಡಾದಲ್ಲಿ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಸರು ನೋಂದಾಣಿಗೆ ಜೂನ್.2 ಕೊನೆ ದಿನವಾಗಿದ್ದ ವಾಸಸ್ಥಳ ಮತ್ತು ವಯಸ್ಸಿನ ದೃಢೀಕರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.ಮಾಹಿತಿಗೆ 98803 34233, 99006 85907 ಸಂಪರ್ಕಿಸಬೇಕು ಎಂದರು.
ಶೇಖರಪ್ಪ ಪೂಜಾರಿ, ರಮೇಶ ಪೂಜಾರಿ, ಜಯರಾಮ ನಾಯ್ಕ, ಕಾಶಿನಾಥ ನಾಯ್ಕ, ಸುನೀಲ್ ಜಾಧವ, ಗಣಪತಿ ನಾಯ್ಕ, ನಾಥಪ್ಪ ನಾಯ್ಕ, ರೇಖಪ್ಪ ದಳಪತಿ, ಹೇಮಂತ ನಾಯ್ಕ, ರಾಜು, ಭೀಲು ನಾಯ್ಕ, ರಾಮು ನಾಯ್ಕ, ಲೋಕಪ್ಪ, ರೇವಣಪ್ಪ, ಶಾಂತಿಲಾಲ, ದೊಡ್ಡ ಧೀರಪ್ಪ, ರಾಮಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.