ಯರಗೋಳ: ಗ್ರಾಮದ ಹೊರವಲಯದ ತಪಾಸಣೆ ಕೇಂದ್ರದಲ್ಲಿ ಹೊರ ರಾಜ್ಯದಿಂದ ಆಗಮಿಸುವ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಈ ತಪಾಸಣೆ ಕೇಂದ್ರದಿಂದ ಪ್ರತಿನಿತ್ಯ ಮಹಾರಾಷ್ಟ್ರ ರಾಜ್ಯದಿಂದ ನೂರಾರು ಸಂಖ್ಯೆಯ ಬೃಹತ್ ವಾಹನಗಳು ಸಂಚರಿಸುತ್ತವೆ.
ತಪಾಸಣೆ ಕೇಂದ್ರಕ್ಕೆ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೇಟಿ ನೀಡಿ ವಾಹನಗಳ ತಪಾಸಣೆ ಮಾಡಿದ್ದಾರೆ. ಆರೋಗ್ಯ, ಕಂದಾಯ, ಪೊಲೀಸ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ತಪಾಸಣೆಗೆ ಆದೇಶ ನೀಡಿದ್ದಾರೆ.
ಹೊರ ರಾಜ್ಯದಿಂದ ಬರುವ ವಾಹನ ಚಾಲಕರಿಗೆ 3 ದಿನದ ಒಳಗಡೆ ತಪಾಸಣೆ ಮಾಡಿಸಿದ ಕೋವಿಡ್ ನೆಗಟಿವ್ ವರದಿ ತೋರಿಸುವಂತೆ ಆದೇಶಿಸಲಾಗಿದೆ. ಇದರಿಂದಾಗಿ ಪೋಲಿಸ್ ಮತ್ತು ವಾಹನ ಚಾಲಕರ ನಡುವೆ ಮಾತಿನ ಚಕಮಕಿ ಸಾಮಾನ್ಯವಾಗಿ ಕಂಡುಬಂತು.
ಈ ಮಧ್ಯೆ, ಯರಗೋಳ ಚೆಕ್ಪೋಸ್ಟ್ ಬಳಿ ರಾಜಸ್ಥಾನದಿಂದ ಬಂದ ಗೂಡ್ಸ್ ಲಾರಿಯೊಂದನ್ನು ನಿಲ್ಲಿಸಲು ಸೂಚಿಸಿದಾಗ, ಲಾರಿ ಚಾಲಕ, ಲಾರಿ ಅತಿವೇಗದಿಂದ ಚಲಾಯಿಸಿ ಕರ್ತವ್ಯ ನಿರತ ಪೇದೆಯ ಮೇಲೆಯೇ ಹಾಯಿಸಲು ಹೋಗಿದ್ದ ಎನ್ನಲಾದ ಸುದ್ದಿಗಳು ಕೆಲಕಾಲ ಆತಂಕ ಮೂಡಿಸಿದ್ದವು.
ಈ ಕುರಿತು 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದ ಯಾದಗಿರಿ ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ, ಅಂತಹ ಯಾವುದೆ ಘಟನೆ ನಡೆದಿಲ್ಲ, ನಾನು ಸ್ಥಳದಲ್ಲಿಯೇ ಇದ್ದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.