ADVERTISEMENT

ಯಾದಗಿರಿ: ಸಿಡಿಲು ಬಡಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2021, 12:16 IST
Last Updated 4 ಮೇ 2021, 12:16 IST
ಮೃತ ಮಹಿಳೆ ಸಿದ್ದಮ್ಮ ಭೀಮಪ್ಪ ಕೌಳೂರು
ಮೃತ ಮಹಿಳೆ ಸಿದ್ದಮ್ಮ ಭೀಮಪ್ಪ ಕೌಳೂರು    

ಯಾದಗಿರಿ: ತಾಲ್ಲೂಕಿನ ಮುನಗಾಲ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ.

ಸಿದ್ದಮ್ಮ ಭೀಮಪ್ಪ ಕೌಳೂರು (45) ತಮ್ಮ ಗ್ರಾಮದ ಹತ್ತಿರವಿರುವ ಹೊಲದಲ್ಲಿ ಶೇಂಗಾ ಕೀಳಲು ಕೂಲಿಗೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಮಧ್ಯಾಹ್ನ 3.30 ರ ಸುಮಾರಿಗೆ ಮಳೆ ಬೀಳುವಾಗ ಕೂಲಿಗೆ ಬಂದವರು ಮನೆಗೆ ತೆರಳಿದ್ದಾರೆ. ಆದರೆ, ಸಿದ್ದಮ್ಮ ಮಾತ್ರ ಗಿಡದ ಕೆಳಗೆ ಕುಳಿತಾಗ ಸಿಡಿಲು ಬಡಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.