ಯಾದಗಿರಿ: ತಾಲ್ಲೂಕಿನ ಮುನಗಾಲ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ.
ಸಿದ್ದಮ್ಮ ಭೀಮಪ್ಪ ಕೌಳೂರು (45) ತಮ್ಮ ಗ್ರಾಮದ ಹತ್ತಿರವಿರುವ ಹೊಲದಲ್ಲಿ ಶೇಂಗಾ ಕೀಳಲು ಕೂಲಿಗೆ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಮಧ್ಯಾಹ್ನ 3.30 ರ ಸುಮಾರಿಗೆ ಮಳೆ ಬೀಳುವಾಗ ಕೂಲಿಗೆ ಬಂದವರು ಮನೆಗೆ ತೆರಳಿದ್ದಾರೆ. ಆದರೆ, ಸಿದ್ದಮ್ಮ ಮಾತ್ರ ಗಿಡದ ಕೆಳಗೆ ಕುಳಿತಾಗ ಸಿಡಿಲು ಬಡಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.