ADVERTISEMENT

ಉಪಾಧ್ಯಕ್ಷರಾಗಿ ವಿಕಾಸ ಆಯ್ಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:36 IST
Last Updated 29 ಸೆಪ್ಟೆಂಬರ್ 2020, 15:36 IST
ವಿಕಾಸ ಸೊನ್ನದ
ವಿಕಾಸ ಸೊನ್ನದ   

ಕೆಂಭಾವಿ: ಪ್ರಶಾಂತ ಕಲ್ಲೂರ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆಯ ಯಾದಗಿರಿ ಜಿಲ್ಲೆ ಉಪಾಧ್ಯಕ್ಷರನ್ನಾಗಿ ವಿಕಾಸ (ಪಿಂಟು) ಸೊನ್ನದ ಕೆಂಭಾವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿ, ಸಾಮಾಜಿಕವಾಗಿ ಹಿಂದುಳಿದದವರನ್ನು ಮೇಲೆತ್ತುವ ಕೆಲಸವನ್ನು ನಿಸ್ವಾರ್ಥದಿಂದ ಮಾಡಬೇಕು. ಸಮಾಜದ ಸಂಘಟನೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ. ರಾಜ್ಯ ಘಟಕದ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ, ಸಂಗಮೇಶ ಚನ್ನಶೆಟ್ಟಿ, ಜಗದೀಶ ಸೂಗೂರ್, ಸಿದ್ದನಗೌಡ ಹೆಬ್ಬಾಳ, ರವಿಗೌಡ ಹೆಮನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT