ADVERTISEMENT

ರ್‍್ಯಾಲಿಯಲ್ಲಿ ವಿಷ ಸೇವಿಸಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2014, 19:30 IST
Last Updated 9 ಏಪ್ರಿಲ್ 2014, 19:30 IST

ಲಖನೌ (ಐಎಎನ್‌ಎಸ್‌): ಅತ್ಯಾಚಾರ­ಕ್ಕೊಳಗಾದ ಮಹಿಳೆ­ಯೊಬ್ಬರು ಮುಖ್ಯ­ಮಂತ್ರಿ ಅಖಿಲೇಶ್‌ ಯಾದವ್‌ ಅವರ ಚುನಾವಣಾ ರ್‍್ಯಾಲಿ ಸಂದರ್ಭ­ದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬಿಜ್ನೋರ್‌ನಲ್ಲಿ ಮಂಗಳವಾರ ನಡೆದ ರ್‍್ಯಾಲಿ ವೇಳೆ ಅಖಿಲೇಶ್‌ ಅವರನ್ನು ಸಮೀಪಿಸಲು ಮಹಿಳೆ ಮುಂದಾದಾಗ ಅಂಗರಕ್ಷಕರು ತಡೆದರು. ಆಗ ಈ ಘಟನೆ ನಡೆದಿದೆ.

ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರು ನೀಡಿದ್ದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಮನನೊಂದು ಈ ರೀತಿ ಮಾಡಿ­ಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಹಿಳೆ ಧರಣಿಯನ್ನೂ ನಡೆಸಿದ್ದರು.

‘ಮಹಿಳೆಯನ್ನು ಆಸ್ಪತ್ರೆಗೆ ಸೇರಿಸ­ಲಾಗಿದ್ದು, ಅವರ ಪರಿಸ್ಥಿತಿ ಗಂಭೀರ­ವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.