ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಇಂದಿರಾ ಕ್ಯಾಂಟಿನ್ ಕಾರ್ಮಿಕರಿಗೆ ಶನಿವಾರ ರಜೆ ನೀಡಲಾಗಿತ್ತು. ಇದು ಗೊತ್ತಾಗದೆ ಬೆಳಗಿನ ಉಪಹಾರ ಸೇವಿಸಲು ಬಂದ ಗ್ರಾಹಕರು ಕ್ಯಾಂಟಿನ್ಗೆ ಬಂದು ಮರಳುತ್ತಿರುವುದು ಕಂಡುಬಂತು.
‘ಕಾರ್ಮಿಕ ಕಾನೂನಿನ ಅನ್ವಯ ಮತದಾನ ಮಾಡಲು ಕ್ಯಾಂಟಿನ್ ಮತ್ತು ಅಡುಗೆ ಕೆಲಸ ಮಾಡುವವರಿಗೆ ರಜೆ ನೀಡಲಾಗಿದೆ. ಭಾನುವಾರದಿಂದ ಕ್ಯಾಂಟಿನ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.