ADVERTISEMENT

ಜೆಡಿಎಸ್‌ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್‌ ಪೂರ್ಣ ಬೆಂಬಲ: ಸಿದ್ದರಾಮಯ್ಯ ಸ್ಪಷ್ಟನೆ

ಪಕ್ಷೇತರರು ಸೇರಿ ಸಂಖ್ಯಾ ಬಲ 118

​ಪ್ರಜಾವಾಣಿ ವಾರ್ತೆ
Published 15 ಮೇ 2018, 13:15 IST
Last Updated 15 ಮೇ 2018, 13:15 IST
ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ, ಗುಲಾಮ್‌ ನವಿ ಆಜಾದ್‌ ಹಾಗೂ ಸಿದ್ದರಾಮಯ್ಯ -ಫೋಟೋ ಕೃಪೆ: ಎಎನ್‌ಐ
ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ, ಗುಲಾಮ್‌ ನವಿ ಆಜಾದ್‌ ಹಾಗೂ ಸಿದ್ದರಾಮಯ್ಯ -ಫೋಟೋ ಕೃಪೆ: ಎಎನ್‌ಐ   

ಬೆಂಗಳೂರು: ‘ಸರ್ಕಾರ ರಚನೆ, ಜೆಡಿಎಸ್‌ಗೆ ಬೆಂಬಲ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪತ್ರ ಕೊಟ್ಟಿದ್ದೇವೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಪತ್ರ ಮುಖೇನ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಹೇಳಿದರು.

ಮಂಗಳವಾರ ಸಂಜೆ ರಾಜ್ಯಪಾಲರಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಮನವಿ ಸಲ್ಲಿಸಿ ಮಾತನಾಡಿದರು.

ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಮುಖಂಡರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ರಾಜ್ಯಪಾಲರು ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಪರಮೇಶ್ವರ ತಿಳಿಸಿದರು.

ADVERTISEMENT

‘ಸರ್ಕಾರ ರಚನೆಗೆ ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಎಐಸಿಸಿ ಜೆಡಿಎಸ್‌ಗೆ ಬೆಂಬಲ ನೀಡಿದ್ದು, ನಮ್ಮ ತೀರ್ಮಾನವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಜೆಡಿಎಸ್‌ ಸರ್ಕಾರ ರಚನೆಗೆ ಸಮ್ಮತಿಸಿದ್ದು, ಜೆಡಿಎಸ್‌ ಮುಖಂಡರೂ ರಾಜ್ಯಪಾಲರಿಗೆ ಅನುಮತಿ ಕೋರಿ ಪತ್ರ ನೀಡಿದ್ದಾರೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಪಕ್ಷೇತರರು(2 ಸ್ಥಾನ), ಜೆಡಿಎಸ್‌(38 ಸ್ಥಾನ) ಹಾಗೂ ಕಾಂಗ್ರೆಸ್‌ನ 78 ಸ್ಥಾನಗಳೊಂದಿಗೆ ಒಟ್ಟು 118 ಸ್ಥಾನಗಳೊಂದಿಗೆ ಸರ್ಕಾರ ರಚನೆಯಾಗಲಿದೆ’ ಎಂದು ಸ್ಪಷ್ಟಪಡಿಸಿದರು. (* ಮತ ಎಣಿಕೆ ಕೊನೆಗೆ ಪಕ್ಷೇತರರು–3; ಜೆಡಿಎಸ್‌–37)

</p><p>ಬಿಜೆಪಿ ಎರಡು ದಿನಗಳ ಸಮಯ ಕೋರಿರುವ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ‘2008ರಲ್ಲಿ ನಡೆಸಿದಂತೆ ಆಪರೇಷನ್‌ ಕಮಲದ ಸಾಧ್ಯತೆ ಇದೆ’ ಎಂದು ಸಂಶಯ ವ್ಯಕ್ತಪಡಿಸಿದರು.</p><p><strong>* ಸಂಖ್ಯಾ ಬಲದ ಆಧಾರದಲ್ಲಿ ಸರ್ಕಾರ ರಚನೆ</strong></p><p><em><strong>–ಸಿದ್ದರಾಮಯ್ಯ, ಕಾಂಗ್ರೆಸ್‌</strong></em></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.