ದಾವಣಗೆರೆ: ಇಲ್ಲಿನ ತರಳಬಾಳು ಬಡಾವಣೆಯ ಮಾಕನೂರು ಬಸಪ್ಪ ಶಾಲೆಗೆ ಶನಿವಾರ ಮತ ಚಲಾಯಿಸಲು ಬಂದಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಚುನಾವಣಾ ಸಿಬ್ಬಂದಿ ಗುರುತಿನ ಚೀಟಿ ತೋರಿಸುವಂತೆ ಕೇಳಿದರು.
ಇದರಿಂದ ಕೊಂಚ ಸಿಟ್ಟು ಮಾಡಿಕೊಂಡವರಂತೆ ಕಂಡ ಸಿದ್ದೇಶ್ವರ ‘ನಾನು ಯಾರು ಎಂದು ನಿನಗೆ ಗೊತ್ತಿಲ್ಲವೇ. ಪರಿಚಯವಿಲ್ಲದವರ ಗುರುತಿನ ಚೀಟಿ ಕೇಳಬಹುದು. ನಾನು ಗೊತ್ತಿರುವುದರಿಂದ ನನ್ನ ಗುರುತಿನ ಚೀಟಿ ಏಕೆ’ ಎಂದು ಕೇಳುತ್ತಲೇ ಗುರುತಿನ ಚೀಟಿ ತೋರಿಸಿದರು. ಅದನ್ನು ಪಡೆದುಕೊಂಡ ಸಿಬ್ಬಂದಿ, ಗುರುತಿನ ಚೀಟಿಯ ಸಂಖ್ಯೆಯನ್ನು ದಾಖಲೆಯಲ್ಲಿ ನಮೂದಿಸಿಕೊಂಡು ಹಿಂದಿರುಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.