ADVERTISEMENT

ಸಚಿವ ರುದ್ರಪ್ಪ ಲಮಾಣಿಗೆ ಸೋಲುಣಿಸಿದ ‘ಲಿಂಗಾಯತ’ ಮತದಾರರ

ಬಸವರಾಜ ಸಂಪಳ್ಳಿ
Published 15 ಮೇ 2018, 9:08 IST
Last Updated 15 ಮೇ 2018, 9:08 IST
ಸಚಿವ ರುದ್ರಪ್ಪ ಲಮಾಣಿಗೆ ಸೋಲುಣಿಸಿದ ‘ಲಿಂಗಾಯತ’ ಮತದಾರರ
ಸಚಿವ ರುದ್ರಪ್ಪ ಲಮಾಣಿಗೆ ಸೋಲುಣಿಸಿದ ‘ಲಿಂಗಾಯತ’ ಮತದಾರರ   

ಹುಬ್ಬಳ್ಳಿ: ಹಾವೇರಿ ವಿಧಾನಸಭಾ ಕ್ಷೇತ್ರ(ಪರಿಶಿಷ್ಟ ಜಾತಿ ಮೀಸಲು)ದಲ್ಲಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ 11.304  ಮತಗಳಿಂದ ಹೀನಾಯ ಸೋಲಾಗಿದೆ. ಇವರ ಪ್ರತಿಸ್ಪರ್ಧಿ ಬಿಜೆಪಿಯ ನೆಹರೂ ಓಲೇಕಾರ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್‌ನ ಲಿಂಗಾಯತ ಮುಖಂಡರು ಕೊನೆ ಗಳಿಗೆಯಲ್ಲಿ ಕೈಕೊಟ್ಟ ಕಾರಣ ಹಾಗೂ ಸಚಿವರ ಹಿಂಬಾಲಕರಿಂದ ಅಧಿಕಾರ ದುರುಪಯೋಗದಿಂದ ರುದ್ರಪ್ಪ ಲಮಾಣಿ ಸೋಲಲು ಮುಖ್ಯ ಕಾರಣ ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

2008ರಲ್ಲಿ ಬಿಜೆಪಿಯಿಂದ ಜಯಗಳಿಸಿದ್ದ ನೆಹರೂ ಓಲೇಕಾರ ಅವರು  2008ರಲ್ಲಿ ಕೆಜೆಪಿ, ಬಿಜೆಪಿ ಇಬ್ಬಾಗದ ಪರಿಣಾಮ ಸೋಲುಂಡಿದ್ದರು. ಆದರೆ, ಇದೀಗ ಮತ್ತೊಮ್ಮೆ ಕ್ಷೇತ್ರದ ಜನರ ವಿಶ್ವಾಸವನ್ನು ಗಳಿಸುವಲ್ಲಿ ಸಫಲರಾಗಿದ್ದಾರೆ.

ADVERTISEMENT

ಮತದಾನಕ್ಕೂ ಎರಡು ದಿನ ಮೊದಲು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕ್ಷೇತ್ರದ ಲಿಂಗಾಯತ ಮುಖಂಡರೊಂದಿಗೆ ಗೌಪ್ಯ ಸಭೆ ನಡೆಸಿ, ಅವರ ಮನವೊಲಿಸಿದ ಪರಿಣಾಮ ಓಲೇಕಾರ ಜಯಗಳಿಸಲು ಮುಖ್ಯ ಕಾರಣ ಎಂಬ ಮಾತು ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.