ADVERTISEMENT

ಸಾರ್ವಜನಿಕ ಜಾಗ ಆಕ್ರಮಣ ಸಲ್ಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಸಾರ್ವಜನಿಕ ಜಾಗ ಆಕ್ರಮಣ ಸಲ್ಲ
ಸಾರ್ವಜನಿಕ ಜಾಗ ಆಕ್ರಮಣ ಸಲ್ಲ   

ರಾಜರಾಜೇಶ್ವರಿ ನಗರದಲ್ಲಿ ಆರು ತಿಂಗಳಿನಿಂದ ಅಭಿವೃದ್ಧಿ ಕಾರ್ಯ ಬಿರುಸಿನಿಂದ ಆಗಿದೆ. ತರಾತುರಿಯಲ್ಲಿ ಕೆಲಸ ಮಾಡುವ ಬದಲು ಮೊದಲಿನಿಂದಲೂ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು. ರಸ್ತೆ, ಒಳಚರಂಡಿ ವ್ಯವಸ್ಥೆ ಸುಧಾರಿಸಿದೆ. ಪಾರ್ಕ್‌ಗಳು ಮೊದಲಿಗಿಂತ ಚೆನ್ನಾಗಿ ಆಗಿವೆ.

ರಾಜರಾಜೇಶ್ವರಿ ನಗರದಲ್ಲಿ ಮುಖ್ಯವಾಗಿ ಸಾರ್ವಜನಿಕ ಸ್ಥಳಗಳ ಬಗೆಗೆ ಯಾರೂ ಹೇಳುವವರಿಲ್ಲ, ಕೇಳುವವರಿಲ್ಲ. ಯಾರ್ಯಾರೋ ಬಂದು ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ. ಖಾಲಿ ಇರುವ ಜಾಗಗಳನ್ನೆಲ್ಲಾ ಆಕ್ರಮಿಸಿಕೊಂಡರೆ ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ. ಖಾಲಿ ಜಾಗಗಳೇ ಇಲ್ಲದಂತಾಗಿ ಎಲ್ಲೆಲ್ಲೂ ಕಟ್ಟಡವೊಂದೇ ಕಾಣುವಂತಾಗುತ್ತದೆ. ಹಸಿರು ಹೆಚ್ಚಿಸುವ ಕೆಲಸ ಹೆಚ್ಚೆಚ್ಚು ಆಗಬೇಕು.

⇒ಶಂಕರಕೃಷ್ಣ ಭಟ್‌, ನಿವೃತ್ತ ಭೂವಿಜ್ಞಾನಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.