ADVERTISEMENT

‘ಸಿ.ಎಂ ತಲೆಯಲ್ಲಿ ಸಕ್ಕರೆ ಲೇಪಿತ ಯೂರಿಯಾ ಗೊಬ್ಬರವಿದೆ’

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಈಶ್ವರಪ್ಪ (ಸಂಗ್ರಹ ಚಿತ್ರ)
ಈಶ್ವರಪ್ಪ (ಸಂಗ್ರಹ ಚಿತ್ರ)   

ಬಾಗಲಕೋಟೆ: ‘ನನ್ನ ತಲೆಯಲ್ಲಿ ಮೆದುಳು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅದು ಇದೆಯೋ ಇಲ್ಲವೋ ಎಂಬುದನ್ನು ಚುನಾವಣೆಯಲ್ಲಿ ಜನ ತೀರ್ಮಾನಿಸುತ್ತಾರೆ. ಆದರೆ ಸಿದ್ದರಾಮಯ್ಯ ತಲೆಯಲ್ಲಿ ಮಾತ್ರ ಸಕ್ಕರೆ ಲೇಪಿತ ಯೂರಿಯಾ ಗೊಬ್ಬರವಿದೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಗುರುವಾರ ಇಲ್ಲಿ ಟೀಕಿಸಿದರು.

‘ಜೈಲಿಗೆ ಹೋದವರನ್ನು ಹತ್ತಿರ ಸೇರಿಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದರು. ಈಗ ಅವರ ಎಡಗಡೆ ಆನಂದಸಿಂಗ್, ಬಲಗಡೆ ನಾಗೇಂದ್ರ ಕೂತಿದ್ದಾರೆ. ಅವರೇನು ಜೈಲಿಗೆ ಹೋಗಿದ್ದರೋ ಇಲ್ಲವೇ ಸ್ವರ್ಗಕ್ಕೆ ಹೋಗಿ ಮಹಾಪುರುಷರ ಉಪದೇಶ ಕೇಳಿಬಂದಿದ್ದಾರೋ’ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಬಿಜೆಪಿ ಸಮಾವೇಶ ಮುಂದಕ್ಕೆ: ಕೂಡಲಸಂಗಮದಲ್ಲಿ ಶನಿವಾರ (ಮಾರ್ಚ್‌ 10) ನಡೆಯಬೇಕಿದ್ದ ಬಿಜೆಪಿ ಹಿಂದುಳಿದ ವರ್ಗದವರ, ಉತ್ತರ ಕರ್ನಾಟಕ ಭಾಗದ ಸಮಾವೇಶವನ್ನು ಮುಂದೂಡಲಾಗಿದೆ.

ADVERTISEMENT

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮಾವೇಶಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದರು. ಹೀಗಾಗಿ ಸಮಾವೇಶವನ್ನು ಮುಂದೂಡಲಾಗಿದೆ’ ಎಂದು ಕೆ.ಎಸ್.ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.