ADVERTISEMENT

ಸೀಗೆಹಳ್ಳಿಯಲ್ಲಿ ಕಲ್ಯಾಣಮಸ್ತು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:30 IST
Last Updated 24 ಫೆಬ್ರುವರಿ 2011, 19:30 IST

ಸೀಗೆಹಳ್ಳಿಯ ಖಾಸಗಿ ಬಂಗಲೆ. ಪ್ರಮುಖ ಕಲಾವಿದರು ಅಲ್ಲಿ ಸೇರಿದ್ದರು. ಬಿ.ಮಲ್ಲೇಶ್ ನಿರ್ದೇಶನದ ‘ಕಲ್ಯಾಣಮಸ್ತು’ ಚಿತ್ರೀಕರಣದ ಸಂದರ್ಭವದು. ರಾಜಶೇಖರ್-ಕಾಂತರಾಜು ನಿರ್ಮಿಸಿರುವ ಈ ಚಿತ್ರಕ್ಕೆ  ಸಿದ್ದಾರ್ಥ ಛಾಯಾಗ್ರಹಣವಿದೆ.ರಾಜ್‌ಮನೋಹರ್ ಸಂಗೀತ ಸಂಯೋಜನೆ ಮಾಡಿದ್ದು,  ದೊಡ್ಡರಂಗೇಗೌಡ, ಕೆ. ಕಲ್ಯಾಣ್ ಗೀತಸಾಹಿತ್ಯ ಬರೆದಿದ್ದಾರೆ.

ಬಸವರಾಜ ಅರಸ್ ಸಂಕಲನ ಮಾಡಲಿದ್ದಾರೆ. ನೃತ್ಯ: ಚಿನ್ನಿ ಪ್ರಕಾಶ್-ಮಂಜು, ಸಾಹಸ: ಕೌರವ ವೆಂಕಟೇಶ್, ಕಲೆ: ಬಾಬುಖಾನ್, ನಿರ್ವಹಣೆ: ದಾಡಿ ರಮೇಶ್. ತಾರಾಗಣದಲ್ಲಿ ರವಿಪ್ರಕಾಶ್, ಅಜಿತ್, ಪೂಜಾಗಾಂಧಿ, ತೇಜಸ್ವಿನಿ, ಅವಿನಾಶ್, ಸಿತಾರಾ, ಮಾಳವಿಕ, ಉಮಾಶ್ರಿ, ಅರವಿಂದ್, ಬ್ಯಾಂಕ್ ಜನಾರ್ದನ್, ಉಮೇಶ್, ಶ್ರಿಕಾಂತ್ ಹೊನ್ನವಳ್ಳಿ, ಜಯಸಿಂಹ ಮುಸುರಿ, ಡಿಂಗ್ರಿ ನಾಗರಾಜ್, ಮನ್‌ದೀಪ್ ರಾಯ್, ನಾಗರಾಜ ಕೋಟೆ ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.