ಕೆ.ಎಸ್.ಸುರೇಶ್ ನಿರ್ಮಿಸುತ್ತಿರುವ `ಸಾಧಕರು~ ಚಿತ್ರಕ್ಕಾಗಿ ಸುಮಿತ್ರ ಜಯರಾಂ ಬರೆದಿರುವ `ಪ್ರೀತಿಯೇ ಪ್ರೀತಿಸೋ ಗೆಳೆಯನೇ ಬಾರೋ ನೀ ಸನಿಹಕೆ ಒಡೆಯನೇ..~
ಎಂಬ ಹಾಡಿನ ಚಿತ್ರೀಕರಣ ಬಿಡದಿ ಸುತ್ತಮುತ್ತ ನಡೆದಿದೆ. ಹೈಟ್ಮಂಜು ನೃತ್ಯ ಸಂಯೋಜಿಸಿದ ಈ ಗೀತೆಯ ಚಿತ್ರೀಕರಣದಲ್ಲಿ ಸೋಮನಾಥ, ಅಮರನಾಥ, ಕೊಟ್ರೇಶ್, ಜಿತೇಂದ್ರ ಮುಂತಾದವರು ಭಾಗವಹಿಸಿದ್ದರು.
ಎಚ್.ಎನ್.ಸೋಮನಾಥ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಇವರೇ ಬರೆದಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣ, ಎಸ್.ಮನೋಹರ್ ಸಂಕಲನ, ಹೈಟ್ ಮಂಜು ನೃತ್ಯ ನಿರ್ದೇಶನ, ನಂಜುಂಡಸ್ವಾಮಿ ಕಲಾ ನಿರ್ದೇಶನ, ಕಿರಣ್ ಭಟ್ ಸಂಗೀತ ಇದೆ. ಸೋಮನಾಥ, ಅಮರನಾಥ, ಕೊಟ್ರೇಶ್, ಜಿತೇಂದ್ರ ನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.