ADVERTISEMENT

ಎಂಜಿಆರ್‌ ಆಗಿ ಅರವಿಂದ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 19:45 IST
Last Updated 12 ಆಗಸ್ಟ್ 2019, 19:45 IST
   

ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಸೆಟ್ಟೇರುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್‌ನಲ್ಲಿ ನಟ, ರಾಜಕಾರಣಿ ಎಂ. ಜಿ. ರಾಮಚಂದ್ರನ್‌ ಅವರ ಪಾತ್ರವನ್ನು ತಮಿಳು ನಟ ಅರವಿಂದ ಸ್ವಾಮಿ ನಿರ್ವಹಿಸಲಿದ್ದಾರೆ.

‘ಜಡ್ಜ್‌ಮೆಂಟಲ್‌ ಕ್ಯಾ ಹೈ’ ಸಿನಿಮಾ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಂಗನಾ ಈಗ ಮುಂದಿನ ಚಿತ್ರದತ್ತ ಗಮನ ಹರಿಸಿದ್ದು, ತಮಿಳಿನಲ್ಲಿ ಈ ಚಿತ್ರ ಅವರ ಚೊಚ್ಚಲ ಚಿತ್ರ. ಇದನ್ನು ಎ.ಎಲ್‌ ವಿಜಯ್‌ ನಿರ್ದೇಶಿಸುತ್ತಿದ್ದಾರೆ.

ಜಯಲಲಿತಾ ರಾಜಕೀಯದ ಮೊದಲ ಪಾಠ ಕಲಿತದ್ದು ಎಂಜಿಆರ್‌ ಅವರಿಂದ. ರಾಜಕೀಯಕ್ಕೆ ಜಯಲಲಿತಾ ಪ್ರವೇಶಿಸಲು ಕಾರಣ ಕೂಡ ಅವರೇ. ಎಂಜಿಆರ್‌ ಸಾವಿನ ಬಳಿಕ ಎಐಎಡಿಎಂಕೆ ಪಕ್ಷದ ನೇತೃತ್ವ ವಹಿಸಿದರು. ನಂತರ ಜನಪ್ರಿಯತೆ ಗಳಿಸಿ ಜನರಿಂದ ಅಮ್ಮ ಎಂದು ಕರೆಸಿಕೊಂಡರು.

ADVERTISEMENT

ಇದೇ ಕತೆಯನ್ನು ‘ತಲೈವಿ’ ಸಿನಿಮಾ ಹೊಂದಿದೆ ಎನ್ನಲಾಗಿದೆ. ಹೀಗಾಗಿ ಅರವಿಂದ ಸ್ವಾಮಿ ಪಾತ್ರ ಕುತೂಹಲ ಕೆರಳಿಸಿದೆ. ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.