ADVERTISEMENT

ದಿನ ಭವಿಷ್ಯ: ಈ ರಾಶಿಯ ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಲಭಿಸಲಿವೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಅಕ್ಟೋಬರ್ 2024, 23:30 IST
Last Updated 1 ಅಕ್ಟೋಬರ್ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಹಿರಿಯರೊಡನೆ ಮಾಡಿದ ಅನವಶ್ಯಕ ತರ್ಕ, ವಿವಾದಗಳಿಂದ ಅಧಿಕಪ್ರಸಂಗಿ ಎನ್ನುವ ಪಟ್ಟವನ್ನು ಹೊಂದುವಿರಿ. ಬಟ್ಟೆ ವ್ಯಾಪಾರಿಗಳಿಗೆ ಇಂದು ಉತ್ತಮ ಮಾರಾಟ ಹಾಗೂ ಲಾಭವಾಗುವುದು.
  • ವೃಷಭ
  • ಸಂಸಾರದಲ್ಲಿ ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಬರುವುದು. ಅಧಿಕ ರೀತಿಯ ಖರ್ಚು-ವೆಚ್ಚಗಳು ಬಂದರೂ ಉಳಿತಾಯಕ್ಕೆ ಕೊರತೆ ಇಲ್ಲ. ಕ್ರೀಡೆ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೆಚ್ಚಲಿದೆ.
  • ಮಿಥುನ
  • ನಿರ್ಲಿಪ್ತತೆಯಿಂದಾಗಿ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ. ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಗೆಳೆತನವನ್ನು ಬೆಳೆಸಿಕೊಳ್ಳುವ ನಡವಳಿಕೆ ರೂಢಿಸಿಕೊಳ್ಳಿರಿ.
  • ಕರ್ಕಾಟಕ
  • ಕಾರ್ಯಕ್ಷೇತ್ರದಲ್ಲಿ ಸ್ವಯಂ ಪರೀಕ್ಷೆಯ ಆರಂಭ. ಹಾಗಾಗಿಯೇ ಎರಡೆರಡು ಬಾರಿ ಪರಿಶೀಲನೆ ಮಾಡುವುದು ಅಗತ್ಯ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ಆತ್ಮಾಭಿಮಾನ ವೃದ್ಧಿ.
  • ಸಿಂಹ
  • ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷತನ, ಮಾತುಗಾರಿಕೆಯನ್ನು ನೋಡಿ ಕಲಿಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಅತಿ ಆಲಸ್ಯತನ ಸರ್ವತೋಮುಖ ಏಳಿಗೆಗೆ ಹಾನಿಯನ್ನು ಉಂಟುಮಾಡಲಿದೆ.
  • ಕನ್ಯಾ
  • ಹೆಂಡತಿ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯದ ಕಡೆ ನಿಮ್ಮ ಹೆಚ್ಚಿನ ಗಮನವಿರುವುದು. ಹತ್ತಾರು ವಿಷಯದಲ್ಲಿ ಗಮನಹರಿಸುವುದಕ್ಕಿಂತ ನಿರ್ದಿಷ್ಟ ಗುರಿ ತಲುಪವಂಥ ಪ್ರಯತ್ನವನ್ನು ಮಾಡಿ.
  • ತುಲಾ
  • ನೇರ ನಡೆ-ನುಡಿ ನಿಮ್ಮ ಗೆಳೆತನಕ್ಕೆ ಹುಳಿ ಹಿಂಡಿದಂತಾಗಬಹದು. ತಂದೆ ಹೇಳುವ ವಿಚಾರಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳದೇ ಅಪಾರ್ಥವಾಗಿ ಅರ್ಥೈಸಿಕೊಳ್ಳುವುದರಿಂದ ಘರ್ಷಣೆಗಳಾಗಬಹುದು.
  • ವೃಶ್ಚಿಕ
  • ಮಡದಿಯಿಂದ ಬರುವ ಸಲಹೆ ಸೂಚನೆಗಳಿಗೆ ಗಮನ ನೀಡಿ ಸ್ವ ಪ್ರಯತ್ನದಿಂದ ಕೆಲಸದಲ್ಲಿ ಮುನ್ನುಗ್ಗಿ. ಮಹಿಳೆಯರಿಗೆ ಆಫೀಸಿನ ಕೆಲಸದ ಒತ್ತಡದಿಂದಾಗಿ ಮನೆಯ ಮುಖ್ಯ ಕೆಲಸಗಳತ್ತ ಗಮನ ಕಡಿಮೆಯಾಗುವುದು.
  • ಧನು
  • ಸಂಶೋಧಕರಿಗೆ ದೊಡ್ಡ ಮಟ್ಟದಲ್ಲಿ ವಸ್ತು ನಷ್ಟ ಆಗಬಹುದು ಅಥವಾ ಸಂಶೋಧನೆಯಲ್ಲಿ ಹಿನ್ನಡೆಯಾಗುತ್ತದೆ. ದುಃಖವು ಎಲ್ಲರ ಜೀವನದಲ್ಲೂ ಇರುವುದು, ಅದಕ್ಕಾಗಿ ಹೆದರುವ ಅವಶ್ಯಕತೆ ಇಲ್ಲ.
  • ಮಕರ
  • ಹೊಸತನ್ನು ಸಾಧಿಸುವಂಥ ಪ್ರಚೋದನೆ ಮತ್ತು ವಿಭಿನ್ನ ವಿಷಯಗಳು ಗಮನ ಸೆಳೆಯಲಿವೆ. ಕಾರ್ಯರಂಗದಲ್ಲಿ ಹೊಸತನಕ್ಕೆ ಯೋಜನೆಯನ್ನು ರೂಪಿಸಬಹುದು. ತಿಂಡಿ ತಿನಿಸುಗಳ ವ್ಯಾಪಾರದವರಿಗೆ ಲಾಭವಾಗುವುದು.
  • ಕುಂಭ
  • ಕಾರ್ಯದಲ್ಲಿ ಕ್ರಿಯಾಶೀಲರಾಗಿ ಮತ್ತು ಮೇಲಧಿಕಾರಿಗಳಲ್ಲಿ ನಡೆನುಡಿ ಉತ್ತಮವಾಗಿದ್ದರೆ ಪ್ರತಿಫಲ ಆಕರ್ಷಕವಾಗಿವುದು. ಯಾವುದೇ ಕೆಲಸ ಮಾಡುವ ಮುನ್ನ ಸಂಪೂರ್ಣವಾಗಿ ವಾಸ್ತವಾಂಶ ಅರಿತುಕೊಳ್ಳಿರಿ. ‌
  • ಮೀನ
  • ಕಣ್ಣಿನ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಅನಾಹುತಕ್ಕೆ ನಾಂದಿ ಮಾಡಿದಂತಾಗುವುದು. ಕಾರ್ಯಸಾಧನೆಗಾಗಿ ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.