ADVERTISEMENT

ದಿನ ಭವಿಷ್ಯ: ಈ ರಾಶಿಯವರು ಸಾಲ ಮರುಪಾವತಿ ಮಾಡುವ ತೀರ್ಮಾನ ಮಾಡಿ

ಮಂಗಳವಾರ, 20 ಮೇ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಮೇ 2025, 21:30 IST
Last Updated 19 ಮೇ 2025, 21:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮುಂಜಾನೆ ಏಳುವಾಗಲೇ ಉತ್ಸಾಹಿಗಳಾಗಿರುತ್ತೀರಿ. ರಕ್ಷಣಾ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಆಯ್ಕೆಗೊಳ್ಳುವಿರಿ. ಜಗದ್ಗುರುವಿನ ದರ್ಶನ ಚೈತನ್ಯ ನೀಡುವುದು.
  • ವೃಷಭ
  • ಆತ್ಮವಿಶ್ವಾಸ ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಹೋಗಬೇಕು. ವ್ಯಾಪಾರ ನಿಮಿತ್ತ ಭೇಟಿ ಮಾಡುವಿರಿ. ಹಿರಿಯ ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿ.
  • ಮಿಥುನ
  • ಮಕ್ಕಳ ಹೆಸರಿನಲ್ಲಿ ನಿವೇಶನ ಖರೀದಿಸುವ ಯೋಚನೆಗಳು ಬರಲಿವೆ. ಸರ್ಕಾರಿ ಅಧಿಕಾರಿಗಳು ಬಡ್ತಿ ಪಡೆದುಕೊಳ್ಳುವಿರಿ. ಶ್ರೀ ಸುಬ್ರಹ್ಮಣ್ಯನ ಸೇವೆ ಮಾಡುವುದರಿಂದ ಶುಭವಿರುವುದು.
  • ಕರ್ಕಾಟಕ
  • ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಚಿಂತನೆ ಮಾಡಬೇಕು. ಮಗಳ ಮದುವೆ ಖರ್ಚನ್ನು ಸರಿದೂಗಿಸುವಿರಿ. ಕಾಗದಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಿರಲಿ. ಹೊಸ ವಸ್ತುಗಳನ್ನು ಕೊಳ್ಳುವ ಯೋಗವಿದೆ.
  • ಸಿಂಹ
  • ಪೂರ್ವ ಆಲೋಚನೆಯ ಕೌಟುಂಬಿಕ ಅಭಿವೃದ್ಧಿಯ ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ. ಗದ್ದೆ ಅಥವಾ ತೋಟದ ಕೆಲಸಗಳಿಗೆ ಮಗನಿಂದ ದೈಹಿಕ ಮತ್ತು ಆರ್ಥಿಕ ಸಹಾಯ ಸಿಗುವುದು. ರುಚಿ ಊಟ ಸವಿಯುವಿರಿ.
  • ಕನ್ಯಾ
  • ಸತ್ಯ ಮಾರ್ಗದಿಂದ ಕಾರ್ಯಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ದಿನದ ಕೆಲಸ ಕಾರ್ಯಗಳಲ್ಲಿ ಬದಲಾವಣೆಗಳು ಇರುವುದಿಲ್ಲ. ಗುಪ್ತಚರ ದಳ ಮಂದಿಗೆ ಕಾರ್ಯಭಾರಗಳು ಹೆಚ್ಚಲಿವೆ.
  • ತುಲಾ
  • ಸ್ನೇಹಿತರು ಹಾಗೂ ಹಿತಚಿಂತಕರು ಸಹಾಯಕ್ಕೆ ಎಂದಿಗೂ ಇರುವರೆಂಬ ನಂಬಿಕೆ ಬರುವುದು. ಮಹಾಗಣಪತಿಯ ದರ್ಶನ ಅಥವಾ ಸ್ಮರಣೆಯಿಂದ ದಿನ ಪ್ರಾರಂಭಿಸಿದರೆ ಮನಸ್ಸಿಗೆ ನೆಮ್ಮದಿ.
  • ವೃಶ್ಚಿಕ
  • ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಉಂಟಾಗಬಹುದು. ಸೂಕ್ಷ್ಮವಾಗಿ ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದರಿಂದ ಕೆಲಸ ಕಾರ್ಯಗಳು ಸಾಗಲಿವೆ.
  • ಧನು
  • ಸಾಲ ಮರುಪಾವತಿ ಮಾಡುವ ತೀರ್ಮಾನ ಮಾಡಿ. ಹೊಸ ಮನೆ ನಿರ್ಮಾಣಕ್ಕಾಗಿ ಹೆಚ್ಚಿನ ತಯಾರಿಯನ್ನು ನಡೆಸುವಿರಿ. ಅಧಿಕಾರಿಗಳ ಸಂಪರ್ಕದಿಂದ ಕೆಲಸಗಳಿಗೆ ಪುಷ್ಟಿ ದೊರೆಯಲಿದೆ.
  • ಮಕರ
  • ಎಲ್ಲರಿಗೂ ಬೇಕಾಗುವ ವ್ಯಕ್ತಿತ್ವ ನಿಮ್ಮದಾಗಲಿದೆ. ಕುಟುಂಬದ ಹಾಗೂ ಸ್ನೇಹಿತರ ನಡುವಿನ ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಳುವುದು. ಪತ್ನಿಯ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು.
  • ಕುಂಭ
  • ವಂಶಪಾರಂಪರ್ಯವಾಗಿ ಬಂದ ವೃತ್ತಿ ಮತ್ತಷ್ಟು ಏಳಿಗೆ ಕಾಣಲಿದೆ. ಕಷ್ಟ ಕಾಲದಲ್ಲಿ ಹೇಳಿಕೊಂಡಿರುವ ಹರಕೆ ತೀರಿಸುವ ಸಲುವಾಗಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ.
  • ಮೀನ
  • ಸಮಾಜ ಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವ ನಿಮಗೆ ಪ್ರಚಾರದ ಜೊತೆಗೆ ರಾಜಕೀಯ ಸೇರಲು ಆಹ್ವಾನ ದೊರೆಯಲಿದೆ. ಅಣ್ಣ ತಮ್ಮಂದಿರ ನಡುವಿನ ಕಲಹಕ್ಕೆ ನ್ಯಾಯ ಹೇಳುವುದು ಸರಿಯಲ್ಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.