ADVERTISEMENT

ದಿನ ಭವಿಷ್ಯ: ಈ ರಾಶಿಯವರು ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಲಾಭ ಕಾಣುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಮೇ 2025, 23:30 IST
Last Updated 25 ಮೇ 2025, 23:30 IST
   
ಮೇಷ
  • ಕಟ್ಟಡ ಕಾರ್ಮಿಕರಿಗೆ ಮತ್ತು ದಿನಕೂಲಿಗಾರರಿಗೆ  ಅವಕಾಶಗಳು ಸಿಗಲಿವೆ. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ತಕರಾರುಗಳು ನಿಧಾನವಾಗಿ ದೂರ ಸರಿದು ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ.
  • ವೃಷಭ
  • ಮುಂದಿನ ಗುರಿಯನ್ನು ನೆನಪಿನಲ್ಲಿಟ್ಟುಕೊಂಡು  ಇಂದಿನ ಹೆಜ್ಜೆಯನ್ನು ಇಡುವುದು ಒಳ್ಳೆಯದು. ರೇಷ್ಮೆ ನೇಕಾರರಿಗೆ ತಮ್ಮ ಹೊಸ ನೇಯ್ಗೆ ಹಾಗೂ ಡಿಸೈನ್‌ಗಳಿಂದ ಉತ್ತಮ ಅವಕಾಶಗಳು ಲಭ್ಯವಾಗಲಿವೆ. 
  • ಮಿಥುನ
  • ಪ್ರವೃತ್ತಿಗೆ ಕೊಡುತ್ತಿರುವ ಗಮನ, ಸಮಯ ಹೆಚ್ಚು ಎಂದು ಅನಿಸಲಿದೆ. ಷೇರುಪೇಟೆಯಲ್ಲಿ ಹಣ ಹೂಡಲು ಸಮಯವಾಗಿದೆ. ನ್ಯಾಯಾಲಯದ ಕಾರ್ಯಗಳಲ್ಲಿ ಮುನ್ನಡೆ ಕಾಣುವಿರಿ.
  • ಕರ್ಕಾಟಕ
  • ಕಷ್ಟಗಳನ್ನು ಎದುರಿಸುವ ಉತ್ತಮ ಎದೆಗಾರಿಕೆಯನ್ನು ಹೊಂದಿರುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು. ವಿಷ್ಣುಸಹಸ್ರನಾಮದ ಪಠಣೆಯಿಂದ ನೆಮ್ಮದಿ ಇರುವುದು.
  • ಸಿಂಹ
  • ಸಮಯವರಿತು ಕಾರ್ಯಸಾಧನೆ ಮಾಡುವುದು ಒಳ್ಳೆಯದು. ಆರಂಭಿಸಿದ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ಪೂರ್ಣಗೊಳ್ಳಲಿವೆ. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಲಾಭ ಕಾಣುವಿರಿ.
  • ಕನ್ಯಾ
  • ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಪ್ರಗತಿ ಇದ್ದು, ಮುಂದಿನ ಭವಿಷ್ಯಕ್ಕೆ ಗೋಚರಕ್ಕೆ ಬರುತ್ತವೆ. ದೀರ್ಘಕಾಲದ ಚಿಂತನೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬಂದೀತು. ಮನರಂಜನೆಗಾಗಿ ಖರ್ಚುವೆಚ್ಚಗಳು ಅಧಿಕವಾಗಲಿದೆ.
  • ತುಲಾ
  • ಶಿಸ್ತಿನಿಂದ ಕೆಲಸ ಕಾರ್ಯಗಳನ್ನು ಮಾಡಿ, ಗಮನಿಸುವ ಜನರು ಸುತ್ತಲೂ ಇರುತ್ತಾರೆ. ಸಾಕುಪ್ರಾಣಿಗಳ ಗಮನವಿರಲಿ, ಮುನ್ನೆಚ್ಚರಿಕೆಯಾಗಿ ವೈದ್ಯರಲ್ಲಿ ಒಮ್ಮೆ ಚರ್ಚಿಸಿ. ಮಾತೃವರ್ಗದವರ ಸಮಾಗಮ ಆಗಲಿದೆ.
  • ವೃಶ್ಚಿಕ
  • ವೈಯಕ್ತಿಕ ಬದುಕಿನಲ್ಲಿ ಹಿತಕರ ಮಾರ್ಪಾಟುಗಳು ಅನಿವಾರ್ಯವಾಗುವುದು. ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಡಿ. ನವದಂಪತಿಗೆ ಸಂತಾನದ ಶುಭಸುದ್ದಿ ಇರಲಿದೆ.
  • ಧನು
  • ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಹಿನ್ನಡೆ ಅನುಭವಿಸಿ ಮನಸ್ಸಿಗೆ ಸಮಾಧಾನ ದೊರಕಲಿದೆ. ಈ ಮಧ್ಯ ವಿವಿಧ ರೀತಿಯಲ್ಲಿ ಧನಾದಾಯದ ಮಾರ್ಗವು ಗೋಚರಿಸಲಿದೆ. ಮುಂದಿನ ಯೋಜನೆಗಳ ಬಗ್ಗೆ ಕಾರ್ಯಾಚರಣೆ ಪ್ರಾರಂಭಿಸಿ.
  • ಮಕರ
  • ಪದವೀಧರರಿಗೆ ತಮ್ಮ ಉದ್ಯೋಗದ ಅನ್ವೇಷಣೆಯಲ್ಲಿ ಹೊಸ ರೀತಿಯ ಬೆಳವಣಿಗೆ ಕಂಡುಬರಲಿದೆ. ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿ ಇರುವ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ.
  • ಕುಂಭ
  • ನೂತನ ಅಧಿಕಾರಿಗಳ ಆಗಮನದಿಂದಾಗಿ ಕಚೇರಿಯಲ್ಲಿ ಕೆಲಸಗಳು ತೋರಿಬರಲಿವೆ. ಲೆಕ್ಕಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ನ್ಯಾಯವಾದಿಗಳಿಗೆ ಸುಲಭದಲ್ಲಿ ಜಯ ಲಭಿಸಲಿದೆ.
  • ಮೀನ
  • ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರಲಿದೆ. ಆತುರ ಬೇಡ. ಕೆಲಸದ ಒತ್ತಡ ಹಾಗೂ ಜವಾಬ್ದಾರಿಗಳು ಹೆಚ್ಚಲಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.