ಉಪಯುಕ್ತ ಲೇಖನ
ಕುರ್ಕೆ ಪ್ರಶಾಂತ ಅವರ `ಕರೆಂಟ್ ಉಳಿಯಿತು, ಬದುಕು ಬೆಳಗಿತು~ ಲೇಖನ ಓದಿ ಅನೇಕ ಉಪಯೋಗಕರ ಮಾಹಿತಿಗಳನ್ನು ತಿಳಿದುಕೊಳ್ಳುವಂತಾಯಿತು. ನಾನೂ ದೊಡ್ಡಬಳ್ಳಾಪುರದವನಾಗಿದ್ದು, ನಮ್ಮ ತಾಲೂಕಿನ ನಾಲ್ಕು ಫೀಡರ್ ವ್ಯಾಪ್ತಿಯ ರೈತರು ಪಂಪ್ಸೆಟ್ನಲ್ಲಿ ಸುಧಾರಣೆ ಅಳವಡಿಸಿಕೊಳ್ಳುವ ಮೂಲಕ `ದೊಡ್ಡ ಪ್ರಮಾಣದ ವಿದ್ಯುತ್ ಅಪವ್ಯಯ ತಡೆಯುವಲ್ಲಿ ಯಶಸ್ವಿಯಾಗಿರುವುದು ಸಂತೋಷವೆನಿಸಿದೆ. ನಮ್ಮ ರೈತರು ಮಾದರಿ ರೈತರಾಗಿದ್ದು, ಸುತ್ತ ಮುತ್ತಲ ರೈತರು ಇದರಿಂದ ಪ್ರಭಾವಿತರಾಗುತ್ತಾರೆ.
-ವಿ.ಹೇಮಂತಕುಮಾರ್, ಬೆಂಗಳೂರು
ಈ ಸಂಪ್ರದಾಯ ಸಾಕು
ಕುಂಚಗನೂರಿನ ಸುಂಗಟಾನ ಸಿದ್ಧಪ್ಪ ಮುತ್ಯಾನ ಜಾತ್ರೆಯಲ್ಲಿ ಮದ್ಯವನ್ನು ಪ್ರಸಾದ ರೂಪದಲ್ಲಿ ಕೊಡುವುದನ್ನು ಓದಿ ಬೇಸರವಾಯಿತು. ಆರೋಗ್ಯಕ್ಕೆ ಕಂಟಕವಾದ ಇಂತಹ ಕೆಟ್ಟ ಸಂಪ್ರದಾಯಕ್ಕೆ ಇತಿ ಹಾಡಲು ಆಡಳಿತವರ್ಗ ಮುಂದಾಗಲಿ.
-ಸಾವಿತ್ರಮ್ಮ.ಕೆ.ವಿಭೂತಿ, ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.