ADVERTISEMENT

ಬಣ್ಣಗಳ ಆಧ್ಯಾತ್ಮಿಕ ಅರಿವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಬಣ್ಣಗಳ ಆಧ್ಯಾತ್ಮಿಕ ಅರಿವು
ಬಣ್ಣಗಳ ಆಧ್ಯಾತ್ಮಿಕ ಅರಿವು   

ಫೆಡಿಲಿಟಸ್ ಗ್ಯಾಲರಿ ಸಂಸ್ಥೆಯು ಕೃಮಾರಕೃಪಾ ರಸ್ತೆ ಬಳಿಯ ಚಿತ್ರಕಲಾ ಪರಿಷತ್ತಿನ ಗ್ಯಾಲರಿ –4ರಲ್ಲಿ ಕೋಟೆಗದ್ದೆ ರವಿ ಅವರ ಸಮಕಾಲೀನ ಶೈಲಿಯ ‘ಬಣ್ಣಗಳ ಆಧ್ಯಾತ್ಮಿಕ ಅರಿವು’ ಕಲಾಕೃತಿಗಳ ಪ್ರದರ್ಶನವನ್ನು ಗುರುವಾರದಿಂದ ಆಯೋಜಿಸಿದೆ. ಅದು ಜೂನ್ 10ರ ವರೆಗೆ ನಡೆಯಲಿದೆ.

ನಟ ವಸಿಷ್ಠ ಸಿಂಹ ಅವರು ಕಲಾಕೃತಿಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ಪತ್ರಕರ್ತ ಜೋಗಿ, ನಿವೃತ್ತ ಐಜಿಪಿ ಗೋಪಾಲ ಬಿ. ಹೊಸೂರು, ಸೈಬರ್ ಇಎನ್‌ಸಿಯ ಶಶಿಮೋಹನ್ ದೊಡ್ಡಮನೆ, ಫೆಡಿಲಿಟಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ್ ಗೌಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಆಧ್ಯಾತ್ಮಿಕ ಮತ್ತು ಪೌರಾಣಿಕ ವಿಷಯಗಳು ಇಂದಿಗೂ ಹೇಗೆ ಪ್ರಸ್ತುತ ಎಂಬುದನ್ನು ಕೋಟೆಗದ್ದೆ ರವಿ ಅವರು ತಮ್ಮ ಕುಂಚದಲ್ಲಿ ಸುಂದರವಾಗಿ ಅರಳಿಸಿದ್ದಾರೆ. ಅವರು ತಮ್ಮ ಕಲಾಕೃತಿಗಳಲ್ಲಿ ದೇಹದ ರಚನೆಯನ್ನು ಆಕರ್ಷಕವಾಗಿ ಕಾಣುವಂತೆ ಚಿತ್ರಿಸಿದ್ದಾರೆ. ಕ್ಯಾನ್ವಸ್ ಹಾಗೂ ಅಕರ್ಲಿಕ್ ಬಣ್ಣಗಳನ್ನು ಬಳಸಿ ಈ ಕಲಾಕೃತಿಗಳನ್ನು ರಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.