ಕರ್ನಾಟಕ ಸಾಹಿತ್ಯ ಪರಿಷತ್ತು: ಭಾನುವಾರ ಗೊ.ರು. ಚನ್ನಬಸಪ್ಪ ಅವರಿಂದ ಪ್ರೊ. ಸಂಪಿಗೆ ತೋಂಟದಾರ್ಯ ಅವರ `ಮನದ ಮುಂದಣ ಆಸೆ~ ಕೃತಿ ಲೋಕಾರ್ಪಣೆ.
ಇದು ಷೇಕ್ಸ್ಪಿಯರ್ ಮಹಾ ಕವಿಯ ಪ್ರಸಿದ್ಧ ಮ್ಯಾಕ್ಬೆತ್ ನಾಟಕದ ಬಯಲಾಟ ರೂಪಾಂತರ.
ಕೃತಿ ಕುರಿತು ಚಲನಚಿತ್ರ ನಿರ್ದೇಶಕ ಬಿ. ಸುರೇಶ ಮಾತನಾಡಲಿದ್ದಾರೆ. ಅತಿಥಿಗಳಾಗಿ ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಾ.ಎ. ಮುರಿಗೆಪ್ಪ, ಜಾನಪದ ವಿ.ವಿ. ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳ: ಪಂಪ ಸಭಾಂಗಣ, ಕರ್ನಾಟಕ ಸಾಹಿತ್ಯ ಪರಿಷತ್ತು, 15ನೇ ಮುಖ್ಯರಸ್ತೆ, ವಿಜಯನಗರ. ಬೆಳಿಗ್ಗೆ 11.30.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.