ADVERTISEMENT

ರಂಗಶಂಕರದಲ್ಲಿ ನಮ್ಮ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ವಿಮೂವ್ ಥಿಯೇಟರ್ ತಂಡದಿಂದ ಮಂಗಳವಾರ ಮತ್ತು ಬುಧವಾರ (ಆ.14) `ನಮ್ಮ ಮೆಟ್ರೊ~ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಅಭಿಷೇಕ್ ಅಯ್ಯಂಗಾರ್ ನಾಟಕ ರಚಿಸಿ ನಿರ್ದೇಶಿಸಿದ್ದಾರೆ. ಬೆಂಗಳೂರು ನಗರ ಇತ್ತೀಚಿನ ದಿನಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದ ಮಹಾನಗರಿ. ಹಳೆಯ ಸೊಬಗು ಮರೆಯಾಗುತ್ತಿದೆ.

ರಾಜಕೀಯ ವಲಯದಲ್ಲಿ ಅಪಾರ ನಂಬಿಕೆ ಇಟ್ಟಿರುವ ಒಬ್ಬ ವೃದ್ಧ. ಆತ ಬ್ಯಾಂಕಿನ ಗುಮಾಸ್ತ. ಮತ್ತೊಬ್ಬ ಸಾಫ್ಟ್‌ವೇರ್ ಎಂಜಿನಿಯರ್, ಕಡಲೆಕಾಯಿ ಮಾರುವವನು ಹೀಗೆ ವಿವಿಧ ಹಿನ್ನೆಲೆಯ ಜನರು ನಗರದ ಕಟ್ಟೆಯೊಂದರ ಮೇಲೆ ಕುಳಿತುಕೊಂಡು ಹರಟೆ ಮೂಲಕ ತಮ್ಮ ತಮ್ಮ ಕಥೆಯನ್ನು ಹೇಳಿಕೊಳ್ಳುವ ಸ್ವಾರಸ್ಯಕರ ಸಂಗತಿ ನಾಟಕದ ವಸ್ತು.
ಸರಳ ನಿರೂಪಣೆ ಹಾಗೂ ಹಾಸ್ಯದ ಲೇಪನವೂ ನಾಟಕದ ವಿಶೇಷ.

ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಎರಡೂ ದಿನ ಸಂಜೆ 7.30.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.