ಸುವರ್ಣ ವಾಹಿನಿ ಗುರುವಾರ ಗಣೇಶ ಹಬ್ಬದಂದು ಮನರಂಜನೆಯ ದೊಡ್ಡ ಬುತ್ತಿಯನ್ನೇ ವೀಕ್ಷಕರ ಮುಂದಿಡುತ್ತಿದೆ.
ಮಧ್ಯಾಹ್ನ 1ರ `ಬೊಂಬಾಟ್ ಭೋಜನ~ದ ವಿಶೇಷ ಸಂಚಿಕೆಯಲ್ಲಿ ಸಿಹಿಕಹಿ ಚಂದ್ರು ಅವರು ಗೌರಿ ಮತ್ತು ಗಣೇಶ ಹಬ್ಬದ ವಿಶಿಷ್ಟ ಖಾದ್ಯ ತಯಾರಿಸಿ ವೀಕ್ಷಕರ ಮುಂದಿಡಲಿದ್ದಾರೆ.
ರಾತ್ರಿ 8ಕ್ಕೆ ನೋಡಿ `ಸ್ವಾಮಿ ನಾವಿರೋದೇ ಹೀಗೆ~ಯಲ್ಲಿ ಧಡೂತಿ ಕಾಯದವರು ಗಣೇಶ ಚತುರ್ಥಿಯನ್ನು ವಿಭಿನ್ನವಾಗಿ ಆಚರಿಸಲಿದ್ದಾರೆ. ಅಕ್ಕ-ಪಕ್ಕದ ಸಂತೆ ಬೀದಿಗಳಿಂದ ಚಂದಾ ಸಂಗ್ರಹಿಸಿ ದೊಡ್ಡ ಗಣಪನನ್ನು ಪ್ರತಿಷ್ಠಾಪಿಸಲಿದ್ದಾರೆ.
`ಪಡುವಾರಳಿ ಪಡ್ಡೆಗಳು~ ರಾತ್ರಿ 10.30ಕ್ಕೆ ಎರಡು ವಿಶೇಷ ಪಾತ್ರಗಳಲ್ಲಿ ಗಣೇಶ ಮತ್ತವನ ಇಲಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.