ADVERTISEMENT

ಅಖಿಲೇಶ್‌ಗೆ ಒಮರ್‌ ಕೃತಜ್ಞತೆ

ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣ ವಾಪಸ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:31 IST
Last Updated 7 ಮಾರ್ಚ್ 2014, 19:31 IST
ಅಖಿಲೇಶ್‌ಗೆ ಒಮರ್‌ ಕೃತಜ್ಞತೆ
ಅಖಿಲೇಶ್‌ಗೆ ಒಮರ್‌ ಕೃತಜ್ಞತೆ   

ಜಮ್ಮು (ಐಎಎನ್‌ಎಸ್‌): ಕಾಶ್ಮೀರದ 67 ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿದ್ದ ದೇಶದ್ರೋಹ ಪ್ರಕರಣವನ್ನು ವಾಪಸ್‌ ಪಡೆದ ಉತ್ತರ ಪ್ರದೇಶ ಸರ್ಕಾರಕ್ಕೆ ಜಮ್ಮು ಮತ್ತು  ಕಾಶ್ಮೀರದ ಮುಖ್ಯ­ಮಂತ್ರಿ ಒಮರ್ ಅಬ್ದುಲ್ಲಾ ಶುಕ್ರವಾರ  ಧನ್ಯವಾದ ಸಲ್ಲಿಸಿದ್ದಾರೆ.

‘ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿದ್ದ ಪ್ರಕರಣ ವಾಪಸ್‌ ಪಡೆಯಲು ಸಹಕರಿ­ಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್ ಅವರಿಗೆ ಧನ್ಯವಾದ­ಗಳು’ ಎಂದು ಒಮರ್‌ ಟ್ವೀಟ್‌ ಮಾಡಿದ್ದಾರೆ.

ಭಾರತದ ವಿರುದ್ಧ ಜಯಗಳಿಸಿದ ಪಾಕಿಸ್ತಾನ ಕ್ರಿಕೆಟ್‌ ತಂಡದ ಪರವಾಗಿ ವಿಜಯೋತ್ಸವ ಆಚರಿಸಿದ್ದ ಕಾರಣಕ್ಕಾಗಿ ಕಾಶ್ಮೀರದ 67 ವಿದ್ಯಾರ್ಥಿಗಳ ವಿರುದ್ಧ ಉತ್ತರಪ್ರದೇಶ ಸರ್ಕಾರ ದೇಶ ದ್ರೋಹದ ಪ್ರಕರಣ ದಾಖಲಿಸಿತ್ತು. ಇದನ್ನು ಖಂಡಿಸಿ ಕಾಶ್ಮೀರ ಕಣಿವೆ­ಯಾ­ದ್ಯಂತ ಪ್ರತಿಭಟನೆ ನಡೆದಿತ್ತು. 

ಗುರುವಾರ ಒಮರ್‌ ಅಬ್ದುಲ್ಲಾ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸ್‌ ಪಡೆಯುವಂತೆ ಅಖಿಲೇಶ್‌ ಯಾದವ್ ಅವರನ್ನು  ಕೋರಿದ್ದರು.

‘ವಿದ್ಯಾರ್ಥಿಗಳು ವಿಜ­ಯೋ­ತ್ಸವ ಆಚರಿ­ಸಬಾರದಿತ್ತು. ಅನುಚಿತ ವರ್ತನೆ ತೋರಿದ ವಿದ್ಯಾರ್ಥಿ­ಗಳನ್ನು ವಿಶ್ವ­ವಿದ್ಯಾ­ಲಯ­ದಿಂದ ಹೊರಹಾಕುವ ಹಕ್ಕು ವಿಶ್ವ­ವಿದ್ಯಾಲ­ಯ­ದ ಆಡಳಿತ ಮಂಡಳಿಗೆ ಇದೆ ಎಂದೂ ಒಮರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.