ನವದೆಹಲಿ (ಪಿಟಿಐ): ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (ಎನ್ಡಿಸಿ) 12 ನೇ ಪಂಚವಾರ್ಷಿಕ ಯೋಜನೆಗೆ ಸಂಬಂಧಿಸಿದ `ಪ್ರಸ್ತಾವ ಪತ್ರಿಕೆ~ ಕುರಿತು ಚರ್ಚಿಸಿ ಅನುಮೋದಿಸಲು ಅಕ್ಟೋಬರ್ 15 ರಂದು ಸಭೆ ಸೇರಲಿದೆ.
`ಪ್ರಸ್ತಾವ ಪತ್ರಿಕೆ~ ಕುರಿತ ಚರ್ಚೆಯ ಜತೆಗೆ, ಮಂದಗತಿಯ ಪ್ರಗತಿ ಹಾಗೂ ಹಣದುಬ್ಬರ ಏರಿಕೆ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಗತಿಯನ್ನು ಪರಿಶೀಲಿಸಲಿದೆ. ಪ್ರಧಾನಿ ನೇತೃತ್ವದ ಸಮಗ್ರ ಯೋಜನಾ ಆಯೋಗವು ಆಗಸ್ಟ್ 20ಂದು `ಪ್ರಸ್ತಾವ ಪತ್ರಿಕೆ~ಗೆ ಅನುಮೋದನೆ ನೀಡಿದೆ.
ಅಲ್ಲದೇ ಇದೇ 15 ರಂದು ಇದಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. 12ನೇ ಪಂಚವಾರ್ಷಿಕ ಯೋಜನೆ ನೀಲನಕ್ಷೆಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.