ADVERTISEMENT

ಗಡಿವಿವಾದ: ಭಾರತದ ಕಳವಳ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ನವದೆಹಲಿ (ಐಎಎನ್‌ಎಸ್‌): ವ್ಯಾಪಾರ ವಹಿವಾಟು ಮತ್ತು ಹೂಡಿಕೆ  ಪೈಪೋಟಿಯಿಂದಾಗಿ ದಕ್ಷಿಣ ಚೀನಾ ಸಾಗರದಲ್ಲಿ  ಉದ್ಭ­ವಿ­ಸಿ­ರುವ  ಗಡಿ  ವಿವಾದ ಮತ್ತು ದೂರ­ಗಾಮಿ ಪರಿಣಾಮ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.

ದಕ್ಷಿಣ ಚೀನಾ ಸಾಗರದಲ್ಲಿ ನೆಲೆಸಿ­ರುವ ಪ್ರಕ್ಷುಬ್ಧ ಸ್ಥಿತಿ ಹಾಗೂ ಇತ್ತೀ­ಚಿನ ಬೆಳವಣಿಗಳನ್ನು ದೃಷ್ಟಿಯಲ್ಲಿ­ಟ್ಟು­ಕೊಂಡು  ಭಾರತ ತನ್ನ ಸಾಗರ ಗಡಿ­ಗಳ ಭದ್ರಪಡಿಸಿಕೊಳ್ಳಲು ಮುಂದಾಗಿದೆ.

ಆಸಿಯಾನ್‌ ರಾಷ್ಟ್ರಗ­ಳಿಗೆ ತನ್ನ ಸಾಗರ  ಮತ್ತು ಸಂಪರ್ಕ ಮಾರ್ಗ­ಗಳನ್ನು  ಮುಕ್ತವಾಗಿಡುವ ಮೂಲಕ ಭಾರತ ಪರಿಣಾಮಕಾರಿ  ಬಾಂಧವ್ಯ ವೃದ್ಧಿಗೆ ಮುಂದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ  ಸಚಿವಾಲಯದ ಕಾರ್ಯದರ್ಶಿ ಅನಿಲ್‌ ವಾಧ್ವಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.