ADVERTISEMENT

ಗುರುದಾಸ್‌ಪುರ ಉಪಚುನಾವಣೆ ಇಂದು

ಪಿಟಿಐ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST

ಗುರುದಾಸ್‌ಪುರ (ಪಂಜಾಬ್‌) : ಬಿಜೆಪಿ ಮುಖಂಡ, ನಟ ವಿನೋದ್‌ ಖನ್ನಾ ಅವರ ನಿಧನದಿಂದ ತೆರವಾಗಿದ್ದ ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆ ಬುಧವಾರ ನಡೆಯಲಿದೆ.

ರಾಜ್ಯ ಘಟಕದ ಅಧ್ಯಕ್ಷ ಸುನೀಲ್‌ ಜಾಖರ್‌ ಅವರನ್ನು ಕಾಂಗ್ರೆಸ್‌, ಉದ್ಯಮಿ ಸ್ವರ್ಣ ಸಲಾರಿಯ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಎಎಪಿಯಿಂದ ನಿವೃತ್ತ ಮೇಜರ್‌ ಜನರಲ್‌ ಸುರೇಶ್‌ ಖಾಜಾರಿಯಾ ಸ್ಪರ್ಧಿಸಿದ್ದಾರೆ. 15 ಲಕ್ಷ ಮತದಾರರಿದ್ದು, ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT