ಅಹಮದಾಬಾದ್: ‘ಜಿಎಸ್ಟಿ ನಿರ್ಧಾರವನ್ನು ಮೋದಿ ಒಬ್ಬನೇ ತೆಗೆದುಕೊಂಡಿದ್ದಲ್ಲ. ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ರಾಜ್ಯಗಳ ತಂಡವೇ ಅದನ್ನು ನಿರ್ವಹಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗಾಂಧಿನಗರದಲ್ಲಿ ಸೋಮವಾರ ಮಾತನಾಡಿದ ಅವರು,‘ಜಿಎಸ್ಟಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರದಲ್ಲಿ ಕಾಂಗ್ರೆಸ್ ಕೂಡ ಸಮಾನ ಪಾಲುದಾರ. ಈ ಬಗ್ಗೆ ಸುಳ್ಳು ಹರಡಬಾರದು’ ಎಂದು ಹೇಳಿದರು.
‘ಯಾವುದೇ ಅರ್ಜಿ ಭರ್ತಿ ಮಾಡಿದರೂ, ಇದು ಮೋದಿಯ ಕೆಲಸ. ನಿಮ್ಮ ಬ್ಯಾಂಕ್ ಖಾತೆಯ ವಿವರ ಕೇಳಿಕೊಂಡು ಅವನು ಬರುತ್ತಾನೆ ಎಂದು ವ್ಯಾಪಾರಸ್ಥರನ್ನು ಪ್ರಚೋದಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.