ನವದೆಹಲಿ (ಪಿಟಿಐ): ಕನಿಮೊಳಿ ಅವರಿಗೆ ಜಾಮೀನು ಸಿಗಲಾರದು ಎಂಬುದು ಖಚಿತವಾಗು ತ್ತಿದ್ದಂತೆ ಯೇ, ಸ್ಥಳದಲ್ಲಿದ್ದ ಅವರ ತಾಯಿ ರಾಜಾತಿ ಅಮ್ಮಾಳ್ ತೀವ್ರ ದುಃಖಿತರಾದರು.
ಕಣ್ಣೀರು ತುಂಬಿಕೊಂಡು ಕೂಡಲೇ ಕೋರ್ಟ್ ರೂಮಿನಿಂದ ಹೊರಗೆ ಧಾವಿಸಿದ ಅವರನ್ನು ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿ.ಆರ್.ಬಾಲು ಅವರೂ ಹಿಂಬಾಲಿ ಸಿದರು.
`ಭರವಸೆ ಕಳೆದುಕೊಳ್ಳ ಬೇಡಿ, ಸುಪ್ರೀಂಕೋರ್ಟ್ಗೆ ತೆರ ಳುವ ಅವಕಾಶ ಇದೆ~ ಎಂದು ಸಮಾ ಧಾನಪಡಿಸಲು ಯತ್ನಿಸಿದರು. ಕೆಲವು ಡಿಎಂಕೆ ಕಾರ್ಯಕರ್ತರು ಇಬ್ಬರನ್ನೂ ಸುತ್ತುವರಿದು ಮೌನ ವಾಗಿ ಈ ದೃಶ್ಯವನ್ನು ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.